ಬಡವರ ಬದುಕು ಕಸಿದುಕೊಂಡ ಕರೋನಾ.

0
37

ಶಹಾಪುರ: ಕೊರಾನಾದಿಂದ ತಾಲ್ಲೂಕಿನ ಮರಮಕಲ್ ಗ್ರಾಮದ ಬಡವರ ಬದುಕು ಇಂದು ಅತಂತ್ರ ಸ್ಥಿತಿಯಲ್ಲಿದೆ.

ಕಷ್ಟಪಟ್ಟು ಬುಟ್ಟಿ ನೇಯ್ದು ವ್ಯಾಪಾರ ಆದರೆ ಮಾತ್ರ ನಮ್ಮ ಹೊಟ್ಟೆ ತುಂಬುತ್ತದೆ ಇಲ್ಲದಿದ್ದರೆ ನಾವು ಉಪವಾಸ ಬೀಳಬೇಕಾಗುತ್ತದೆ ಎಂದು ಬುಟ್ಟಿ ನೇಯುವ ಮಹಿಳೆ ತಮ್ಮ ಅಳಲನ್ನು ತೋಡಿಕೊಂಡಳು.

Contact Your\'s Advertisement; 9902492681

ಕಂಡು ಕೇಳರಿಯದಂಥ ಮಾರಕ ರೋಗಕ್ಕೆ ಇಡೀ ಜಗತ್ತೇ ತಲ್ಲಣಗೊಂಡಿದೆ ಪ್ರತಿಯೊಬ್ಬರ ಬದುಕು ತೊಂದರೆಗೀಡಾಗಿದ್ದು ಸರಕಾರ ಈಗಲಾದರೂ ಎಚ್ಚೆತ್ತುಕೊಂಡು ಬಡವರಿಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಂಡರು. ಬದುಕಿನ ಜತೆಗೆ ಕಲೆಯನ್ನು ರೂಢಿಸಿಕೊಂಡಿರುವ ಇಂಥ ಬಡವರ ನೆರವಿಗೆ ಸರಕಾರ ಧಾವಿಸಬೇಕಾಗಿದೆ ಎಂದು ಕನ್ನಡ ಜಾನಪದ ಪರಿಷತ್ತಿನ ಸಂಚಾಲಕರು ಸರ್ಕಾರಕ್ಕೆ ಮನವಿ ಮಾಡಿಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here