ಕಲಬುರಗಿ: ಮೂವರು ಕೊಲೆ ಆರೋಪಿಗಳು ಅರೆಸ್ಟ್

0
145

ಕಲಬುರಗಿ: ಬರ್ಬರವಾಗಿ ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಾರಾಫೈಲ್ ಬಡಾವಣೆಯ ವಿಶಾಲ್ ಕೊಲೆಯಾದ ಯುವಕ. ಇದೆ ಬಡಾವಣೆಯ ಸುನಿಲ್ ಅಲಿಯಾಸ್ ಸೋನು ಕಾಂಬಳೆ, ಶಿವಲಿಂಗ ಹುಲಿಮನಿ ಹಾಗೂ ರಾಜು ಗುರುಸುಣಗಿ ಕೊಲೆ ಮಾಡಿದ ಬಂಧಿತ ಆರೋಪಿಗಳು. ಸುನಿಲ್ ಎಂಬಾತ ಕೊಲೆಯಾದ ವಿಶಾಲ್ ತಾಯಿಯಿಂದ ಮೂರು ಲಕ್ಷ ರೂಪಾಯಿ ಹಣ ಪಡೆದು ವಾಪಸ್‌ ಕೊಡದೇ ಸತಾಯಿಸುತ್ತಿದ್ದ. ಹಣ ಕೊಡುವಂತೆ ವಿಶಾಲ್ ಆರೋಪಿ ಮೇಲೆ ಒತ್ತಡ ಹಾಕುತ್ತಿದ್ದ, ಈ ಹಿನ್ನೆಲೆ ತನ್ನ ಸಂಗಡಿಗರ ಜೊತೆಗೂಡಿ ವಿಶಾಲ್‌ನನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Contact Your\'s Advertisement; 9902492681

ನಾಗನಹಳ್ಳಿ ಕ್ರಾಸ್ನ ರಾಜಾಪುರ ನಾಲಾದ ಬ್ರಿಡ್ಜ್‌ ಬಳಿ ವಿಶಾಲ್ ಶವ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ದೊರಕಿದೆ. ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here