ಬಿಸಿ ಬಿಸಿ ಸುದ್ದಿಕಲೆ-ಕ್ರೀಡೆಸಾಹಿತ್ಯ ನಮ್ಮನ್ನಗಲಿದ ಹಿರಿಯ ಸಾಹಿತಿಗಳಾದ ಎ.ಕೃಷ್ಣ,ಶ್ರೀಬಸವರಾಜ ರುಮಾಲರನ್ನು ನೆನೆದು ಕವಿತೆ ಮೂಲಕ emedialine - July 14, 2020 0 65 ಫೇಸ್ಬುಕ್ ರಂದು ಹಂಚಿಕೊಳ್ಳಿ ಟ್ವಿಟರ್ ಟ್ವೀಟ್ ಹೂಬೊಗಸೆ ನಮನ ಕೃಷ್ಣೆಭೀಮೆಯರ ತಿಳಿನೀರಿನಲ್ಲ್ಲಿ ತೇಲಿಹೋದವೆರಡು ದೀಪ| ಮನಮನದ ಕೊಳದಲೂಅರಳಿನಿಂತಿವೆ ಬಿಳಿ ಕಮಲದಂಥ ರೂಪ || ೧ || ಹರಿವ ಕಲಕಲದಿ ಬೆರೆತು ಹೋಯ್ತು ಓಂಕಾರ ಮುರಳಿನಾದ | ಬಸವ ಬೆಳಕಿನ ರುಮಾಲು ಕಳಚಿ ಸೇರಿ ಶಿವನ ಪಾದ || ೨ || ಎದೆಗಡಲ ಮುತ್ತುಗಳ ಮಿಂಚು ಹೊಳಪಿಗೆ ಶ್ವೇತಪಕ್ಷಿ ಹಾರಿ | ಚಂದ್ರಲಾಂಬೆಯ ಕರುಣ ಕಿರೀಟದಿ ಸಗರನಾಡ ತೋರಿ || ೩|| ರುಮಾಲು ಬಸವನ ವಿಭೂತಿ ಬಿಳುಪಿಗೆ ಬೆಳಕು ಪಡೆದ ಜನತೆ | ನಿಮ್ಮ ಚೆನ್ನುಡಿಯು ವಚನದೈಸಿರಿಯು ಬಾಳಹಾದಿಗ್ಹಣತೆ || ೪ || ಜೀವಂತ ಶವಗಳನು ನಗಿಸಿದಾತ ಪರದಲ್ಲು ನಗಿಸಲ್ಹೋದ | ಭಾವಬೆಸುಗೆಯಲಿ ನೀಡಿದೊಲವು ಅದುವೆ ಶಿವನ ಪ್ರಸಾದ ||೫ || ಶುಭಸುಪ್ರಭಾತಕೆ ನಸುನಗುವ ನಸುಕು ದಿಸೆದಿಸೆಗೂ ದೇವಗಾನ | ಸಹಜದಾರಿಯಲಿ ನಡೆದ ಕೃಷ್ಣ ಆ ದಿವ್ಯ ಬೆಳಕಿನೊಳು ಲೀನ || ೫ || ನಿಮ್ಮ ಬರುವಿಕೆಗೆ ನೋಂತುನಿಂತಿದೆ ಸಗರನಾಡ ಜನತೆ | ಬೆಳೆವ ಕುಡಿಗಳಿಗೆ ತಿಳಿಬೆಳಕ ನೀಡಲು ಮತ್ತೆ ಬನ್ನಿ ಧರೆಗೆ || ೬ || ತಾಳಲಾರೆನು ಬಸವ ಕೃಷ್ಣರೆ ನಿಮ್ಮೀ ಅಗಲಿಕೆಯ ನೋವು ಬಾಧೆ | ಹರಿಹರರಂದದಿ ಒಂದಾಗಿ ಬನ್ನಿ ಸುರಪುರದ ಸಿರಿಯ ನೆಲಕೆ || ೭ || ಮುಳ್ಳು ತುಳಿದು ಹೂ ಹರಡಿ ನಡೆದಿರಿ ನೆಟ್ಟು ಒಳಿತ ಸಸಿನ | ಕಂಬನಿಯ ಮನದಿ ಅರ್ಪಿಸುವೆ ನಿಮಗೆ ಹೂಬೊಗಸೆ ನಮನ ದವನ || ೮ || -ಡಿ.ಎನ್.ಅಕ್ಕಿ. ದಿ.೧೪.೦೭.೨೦೨೦. 9448577898. Contact Your\'s Advertisement; 9902492681