ಅಂಬೇಡ್ಕರ್ ಮೂರ್ತಿಗೆ ಅವಮಾನ : ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

0
49

ಶಹಾಪುರ: ತಾಲ್ಲೂಕಿನ ಸೈದಾಪುರ ಗ್ರಾಮದಲ್ಲಿ ಡಾ: ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಸೆಗಣಿ ಎರಚಿ ಅವಮಾನ ಮಾಡಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕೆಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಆಗ್ರಹಿಸಿದೆ.

ತಹಸೀಲ್ದಾರ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಸಂಚಾಲಕರಾದ ಮರೆಪ್ಪ ಜಾಲಿಬೆಂಚಿ ಮಾತನಾಡಿ ಇಡೀ ವಿಶ್ವವೇ ಮೆಚ್ಚುವಂತೆ ಮಾದರಿ ಸಂವಿಧಾನವನ್ನು ರಚಿಸಿ ಸಮಾಜದಲ್ಲಿ ಮೇಲು ಕೀಳು ಎನ್ನುವ ಅಸಮಾನತೆ ತೊಡೆದು ಹಾಕಿ ಮಾನವರೆಲ್ಲರೂ ಒಂದೇ ಎನ್ನುವ ಸಂದೇಶವನ್ನು ಸಾರಿದ ಮಹಾಜ್ಞಾನಿ ಭಾರತರತ್ನ ಡಾ: ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುವ ಹಾಗೂ ಶಾಂತಿ ಸಹಬಾಳ್ವೆ ಕದಡುವ ಯಾರೇ ಆಗಿರಲಿ ಅಂಥವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಂಡು ಇಂಥ ಹೇಯ ಕೃತ್ಯ ಎಸಗಿದ ಕಿಡಿಗೇಡಿಗಳಿಗೆ ಗಡಿಪಾರು ಮಾಡಬೇಕು ಎಂದು ದಲಿತ ಸಂಘರ್ಷ ಸಮಿತಿ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಬಸವರಾಜ ಗುಡಿಮನಿ,ಶರಣುರಡ್ಡಿ ಹತ್ತಿಗೂಡೂರ,ರವೀಂದ್ರನಾಥ ಹೊಸ್ಮನಿ,ಭೀಮರಾಯ ಸೈದಾಪುರ,ಗುರುಲಿಂಗಪ್ಪ ಹುರುಸಗುಂಡಗಿ, ಹಣಮಂತ್ರಾಯ ದೊಡ್ಮನಿ, ಸೈದಾಪುರ,ನಿಂಗಣ್ಣ ನಾಟೇಕರ್, ನಾನಾಗೌಡ ಮೇಟಿ, ಚಂದ್ರಶೇಖರ್ ನಾಟೇಕರ್ ಹತ್ತಿಗೂಡೂರು, ಹಾಗೂ ಇತರರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here