ಭಾರೀ ಮಳೆಗೆ ಕಂಗಾಲಾದ ಸಂತ್ರಸ್ಥರಿಗೆ ಸೂಕ್ತ ಪರಿಹಾರಕ್ಕೆ ವಿಲಾಸ ಗೌತಂ ಆಗ್ರಹ

0
315

ಕಲಬುರಗಿ: ಚಿಂಚೋಳ್ಳಿ, ಸೇಡಂ, ಚಿತ್ತಾಪೂರ ತಾಲೂಕಿನಲ್ಲಿ ಧಾರಕರ ಮಳೆ ಆಗಿರುವ ಹಿನ್ನೆಲೆಯಲ್ಲಿ ಜನರು ತೊಂದರೆ ಅನುಭಸುತ್ತಿದ್ದಾರೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ರಿಪಬ್ಲಿಕ್ ನ ಯುಥ್ ಫೇಡರೆಷನ ಮುಖಂಡ ವಿಲಾಸ ಗೌತಂ ನಿಡಗುಂದಾ ಅವರು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕೆ ಪ್ರಕಟಣೆ ನೀಡಿದ ಅವರು, ಕೋರೊನ ಮಹಾಮಾರಿ ಅಟ್ಟಹಾಸ ಒಂದು ಕಡೆಯಾದರೆ, ಈ ಭಾಗದಲ್ಲಿ ಸತತವಾಗಿ 30ಗಂಟೆಗಳ ಕಾಲ ಸುರಿದ ಮಳೆಯಿದಾಗಿ ಅನೇಕ ಜನರ ಮನೆಗಳಲ್ಲಿ ನೀರು ತುಂಬಿವೆ ಜನ ತತ್ತರಿಸುತ್ತಿದ್ದಾರೆ ಹಾಗೂ ಅನೇಕ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆಯನ್ನು ಹಾಳು ಮಾಡಿವೆ. ಈ ಅತಿವೃಷ್ಟಿಯಿಂದ ರೈತರ ಬದುಕು ಕಂಗಾಲಾಗಿದೆ ಸರಕಾರ ತಕ್ಷಣ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here