ಎಂಜಿನಿಯರಿಂಗ್ ಮುಗಿಸಿದ್ದ ಯುವಕ ನೇಣಿಗೆ ಶರಣು

0
113

ಕಲಬುರಗಿ: ಇಲ್ಲಿನ ಬಿದ್ದಾಪೂರ ಅರಳಿಕಟ್ಟೆ ಪ್ರದೇಶದಲ್ಲಿ ಎಂಜಿನಿಯರಿಂಗ್ ಮುಗಿಸಿದ್ದ ಯುವಕನೊಬ್ಬ ನೇಣಿಗೆ ಶರಣಾದ ದಾರುಣ ಘಟನೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ನಡೆದಿದೆ.

ನಗರದ ನಿವಾಸಿ ಪ್ರವೀಣ ಕುಮಾರ ಮೃತ ಯುವಕ. ಮೃತನ ತಂದೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಪ್ರವೀಣ ಕಳೆದ ವರ್ಷವಷ್ಟೆ ಬಿಇ ಮುಗಿಸಿ ಮನೆಯಲ್ಲಿಯೇ ಇದ್ದ. ಆದರೆ ಅದೇನಾಯ್ತೋ ಗೊತ್ತಿಲ್ಲ. ಮನೆಯಲ್ಲಿ ಅಕ್ಕ ಮತ್ತು ಅಮ್ಮ ಇಬ್ಬರೇ ಇರುವಾಗ ನೇಣು ಬಿಗಿದ್ದುಕೊಂಡ, ಈ ವೇಳೆ ನೋಡಿದ ಅಮ್ಮ ಮಗನನ್ನು ಉಳಿಸಲು ಪ್ರಯತ್ನಿಸಿದ್ದಾಳೆ. ನೇಣು ಹಾಕಿದ ಸೀರೆಯನ್ನು ಆತನ ಅಕ್ಕ ಕತ್ತರಿಸಿ ಕೆಳಗೆ ಇಳಿಸಿದ್ದಾರೆ ಎನ್ನಲಾಗಿದೆ.

Contact Your\'s Advertisement; 9902492681

ಈ ವೇಳೆ ಒಂದಿಷ್ಟು ಉಸಿರಾಡುತ್ತಿದ್ದು ಪ್ರವೀಣನ್ನು ಕೂಡಲೇ ಆಸ್ಪತ್ರೆಗೆ ಸೇರಿಸುವ ಪ್ರಯತ್ನದ ವೇಳೆಯಲ್ಲಿ ವಿಧಿಯಾಟಕ್ಕೆ ಬಲಿಯಾಗಿ ಅಮ್ಮ-ಅಕ್ಕನ ಮಡಿಲಲ್ಲೇ ಪ್ರವೀಣ ಪ್ರಾಣಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here