ನಕಲಿ ಕಾರ್ಮಿಕರ ಕಾರ್ಡುಗಳ ಪತ್ತೆ ಹಚ್ಚಲು ಕಾರ್ಮಿಕರ ಹಿತರಕ್ಷಣಾ ಸಂಘ ಮನವಿ

0
58

ಸುರಪುರ: ತಾಲೂಕಿನ ಅನೇಕ ಕಡೆಗಳಲ್ಲಿ ಆನಲೈನ್ ಮೂಲಕ ನಕಲಿ ಗುತ್ತೆದಾರರ ಹೆಸರುಗಳನ್ನು ಬಳಸಿಕೊಂಡು ಕಾರ್ಮಿಕರ ಕಾರ್ಡುಗಳನ್ನು ಮಾಡಿಕೊಡಲಾಗುತ್ತಿದೆ.ಇದರಿಂದ ನಿಜವಾದ ಕಾರ್ಮಿಕರಿಗೆ ಅನ್ಯಾಯವಾಗುವ ಸಾಧ್ಯತೆ ಇದೆ.

ಆದ್ದರಿಂದ ಆನಲೈನ್ ಮೂಲಕ ನಕಲಿ ಕಾರ್ಮಿಕರ ಕಾರ್ಡುಗಳನ್ನು ಮಾಡಿಕೊಡುವವರನ್ನು ಪತ್ತೆ ಹಚ್ಚಿ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ಸಂಘದ ಅಧ್ಯಕ್ಷ ಭಾಗಪ್ಪ ಏವೂರ ಸುರಪುರ ತಾಲೂಕು ಕಾರ್ಮಿಕ ಇಲಾಖೆ ನಿರೀಕ್ಷಕ ಗಂಗಾಧರ ಅವರಿಗೆ ಮನವಿ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಪ್ರಶಾಂತ ಜೈನಾಪುರ ಬಸವರಾಜ ಜೈನಾಪುರ ಹಾಗು ಕೃಷ್ಣಾ ಪರನಸಹಳ್ಳಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here