ಎನ್‌ಎಸ್‌ಎಲ್: ಅಧಿಕಾರಿಗಳ ನಿವೃತ್ತಿ, ಸ್ವಾಗತ ಸಮಾರಂಭ

0
99

ಆಳಂದ: ತಾಲೂಕಿನ ಭೂಸನೂರನಲ್ಲಿರುವ ಎನ್‌ಎಸ್‌ಎಲ್ ಸುಗರ‍್ಸ್ ಘಟಕ ೨ರ ಕಬ್ಬು ಅಭಿವೃದ್ಧಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ಷೇತ್ರ ಸಹಾಯಕ ಈರಣ್ಣ ಕೋಣೆ ಮತ್ತು ಕೇನ್ ಯಾರ್ಡನ ಅಸಿಸ್ಟಂಟ್ ಸೂಪರವೈಜರ್ ಭುಜಲಿಂಗ ಕಣ್ಣೂರ ಅವರ ನಿವೃತ್ತಿ ಸಮಾರಂಭ ಶುಕ್ರವಾರ ಜರುಗಿತು.

ಇದೇ ಸಂದರ್ಭದಲ್ಲಿ ಕಬ್ಬು ಅಭಿವೃದ್ಧಿ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡ ಅಮರೀಶ ಕದಮ ಹಾಗೂ ಕೇನ್ ಮ್ಯಾನೇಜರ್ ಜಕ್ಕಪ್ಪ ಉಟಗಿ ಅವರನ್ನು ಸ್ವಾಗತಿಸಲಾಯಿತು. ನಿವೃತ್ತರಾದ ಮತ್ತು ಹೊಸದಾಗಿ ನೇಮಕಗೊಂಡ ಅಧಿಕಾರಿಗಳನ್ನು ಎಲ್ಲ ಸಿಬ್ಬಂದಿಗಳ ಪರವಾಗಿ ಸನ್ಮಾನಿಸಲಾಯಿತು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ದೇಸಾಯಿ, ಲೆಕ್ಕ ಪರಿಶೋಧಕ ಪ್ರಕಾಶ ಯರಗಲ, ಹಣಕಾಸು ವಿಭಾಗದ ಸುಭಾಷ್ ಡೋರಾ, ಸಿಬ್ಬಂದಿಗಳಾದ ನಾಗರಾಜ, ಪ್ರಶಾಂತ ಪಾಟೀಲ, ರಾಜೇಶ ಬೆಳಂ, ಶ್ರೀಮಂತ ಮಾಡ್ಯಾಳ, ಮಲ್ಲಿನಾಥ ಮಲಶೆಟ್ಟಿ, ದತ್ತಪ್ಪ ಮೇಲ್ಕೇರಿ, ಶರಣಬಸಪ್ಪ ಲಾವಣಿ ಸೇರಿದಂತೆ ಕಬ್ಬು ಅಭಿವೃದ್ಧಿ ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಿದ್ದಾರಾಮ ನಡಗೇರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಹಾನಿಂಗಪ್ಪ ಜಮಾದಾರ ನಿರೂಪಿಸಿದರೆ, ದೇವೇಂದ್ರ ಮೇಲ್ಕೇರಿ ವಂದಿಸಿದರು. ಸಂಸ್ಥೆಯ ಉಪಾಧ್ಯಕ್ಷ ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here