ಕಲಬುರಗಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಹಿತಿ ತಂತ್ರಜ್ಞಾನ ಮತ್ತು ಡೇಟಾ ವಿಭಾಗದ ಮುಖ್ಯಸ್ಥರಾಗಿ ಶಾಸಕರು, ಮಾಜಿ ಸಚಿವರಾದ ಪ್ರಯಾಂಕ್ ಎಂ. ಖರ್ಗೆಯವರು ನೇಮಕಗೊಂಡಿದ್ದಕ್ಕೆ ಕಾಂಗ್ರೆಸ್ ಮುಖಂಡ ಮಜರ ಆಲಂ ಖಾನ್ ಸನ್ಮಾನಿಸಿದರು. ಈರಣ್ಣ ಝಳಕಿ, ಪ್ರವೀಣಕುಮಾರ ಪಾಟೀಲ್ ಹರವಾಳ, ಡಾ.ಕಿರಣ ದೇಶಮುಖ, ಸಂತೋಷ ಪಾಟೀಲ್ ದಣ್ಣೂರ, ರಾಜೇಶ ಗುತ್ತೇದಾರ, ಚೇತನ್ ಗೋನಾಯಕ್, ರಾಜೀವ್ ಜಾನೆ ಇದ್ದರು.