ನಡೆ-ನುಡಿಗಳು ಶರಣರ ಸಿದ್ಧಾಂತಗಳು

0
159

ಕಲಬುರಗಿ: ಚಿತ್ರಕಲೆಯಲ್ಲಿಕಾಯಕದ ಶರಣರನ್ನುಅವರ ವ್ಯಕ್ತಿತ್ವ, ಪ್ರತಿರೂಪ ಬಿತ್ತರಿಸದಿದ್ಧಲ್ಲಿಅವರ ಭೌತಿಕ ಪರಿಕಲ್ಪನೆ ನಮ್ಮಕಣ್ಣೆದುರಿಗೆ ಉಳಿಯುತ್ತಿರಲಿಲ್ಲ. ಬಸವಣ್ಣ ಮತ್ತುಅವರ ಸಮಕಾಲೀನ ಕಾಯಕ ಶರಣರು ವಚನಗಳ ಮೂಲಕ ಸಾರಸ್ವತ ಲೋಕಕ್ಕೆ ಪರಿಚಯವಾಗುವುದರಜೊತೆಅವರ ಭೌತಿಕ ವ್ಯಕ್ತಿತ್ವದ ಪರಿಚಯವನ್ನು ಕಲಾವಿದರು ತಮ್ಮ ಚಿತ್ರಕಲೆಯ ಮೂಲಕ ಕಟ್ಟಿಕೊಟ್ಟರು.

ಕಲಬುರಗಿ ಬಸವ ಸಮಿತಿಯಅನುಭವ ಮಂಟಪದಲ್ಲಿ ಚೈತನ್ಯಮಯಿ ಆರ್ಟ್‌ಗ್ಯಾಲರಿ ಮತ್ತು ಚೈತನ್ಯಮಯಿ ಟ್ರಸ್ಟ್‌ನವರು ಶರಣರ ಸ್ಮರಣಾರ್ಥ ಹಮ್ಮಿಕೊಂಡಅರಿವಿನ ಮನೆ 596ನೆ ಯದತ್ತಿ ಕಾರ್ಯಕ್ರಮದಲ್ಲಿ ’ಚಿತ್ರಕಲೆಯಲ್ಲಿ ಕಾಯಕದ ಶರಣರು’ ವಿಷಯದ ಮೇಲೆ ಅನುಭಾವ ನೀಡುತ್ತಾ ಮಾತನಾಡಿದ ’ಶರಣಮಾರ್ಗ’ದ ಸಂಪಾದಕರಾದ ಶ್ರೀ ಶಿವರಂಜನ್ ಸತ್ಯಂಪೇಟೆಯವರು ಕರ್ನಾಟಕ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಲೋಕದ ಇತಿಹಾಸದಲ್ಲಿ ಹನ್ನೆರಡನೆಯ ಶತಮಾನ ಒಂದು ಸುವರ್ಣಯುಗ.  ಕಾರಣ ಬಸವಣ್ಣಅಲ್ಲಮಪ್ರಭು, ಅಕ್ಕಮಹಾದೇವಿಯಂತಹವರು ಮಾತ್ರ ವಚನಗಳನ್ನು ರಚಿಸಿದ್ದಲ್ಲದೆ ಕಸಗುಡಿಸುವಂತ ಸತ್ಯಕ್ಕನಂತಹವರು ವಚನಗಳನ್ನು ರಚಿಸಿದ್ದು ಗಮನಿಸಬೇಕಾದ ಸಂಗತಿ. ಅನಕ್ಷರತೆಯೇದಟ್ಟವಾಗಿದ್ದ ಆಗಿನ ಕಾಲಕ್ಕೆ ಇದೊಂದು ಅಸಾಧಾರಣ ಪ್ರಕ್ರಿಯೆಯಾಗಿತ್ತು.

Contact Your\'s Advertisement; 9902492681

ವಚನಗಳನ್ನು ರಚಿಸುವುದರ ಮೂಲಕ ಶರಣರು ಬದುಕಿನ ಬಗ್ಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ನಡೆ-ನುಡಿಗಳನ್ನು ತಮ್ಮ ಸಿದ್ಧಾಂತವಾಗಿಸಿಕೊಂಡು ಏನನ್ನು ನಡೆದರೋಅದನ್ನೇ ನುಡಿದರು. ಅವರು ರಚಿಸಿದ ವಚನ ಸಾಹಿತ್ಯದಲ್ಲಿ ಬರಿಯ ಮಾತುಗಳಿಲ್ಲ. ಅಲ್ಲಿಆಚಾರವಿದೆ, ವಿಚಾರವಿದೆ, ವಿಜ್ಞಾನವಿದೆ ನೀತಿಯಿದೆ, ಜೀವನದರ್ಶನವಿದೆ. ಭಾವಗಳ ಸಮ್ಮಿಲನವಿದೆ.  ಅಷ್ಟೇ ಅಲ್ಲದೆ ೨೧ನೆಯ ಶತಮಾನದಕನ್ನಡಿಗರ ಮಹುಮುಖ ಏಳ್ಗೆಗೆ ಕಾರಣವಾಗಬಹುದಾದ ಅನೇಕ ಮೌಲ್ಯಯುತ ಚಿಂತನೆಗಳಿವೆ. ಇಪ್ಪತ್ತೊಂದನೆಯ ಶತಮಾನದ ಅನೇಕ ವಿದ್ಯಾಮಾನಗಳಿಗೆ ೧೨ನೆಯ ಶತಮಾನದಲ್ಲಯೇ ಅವುಗಳ ಪರಿಹಾರಕುರಿತು ಶರಣರು ಚಿಂತಿಸಿದ್ದರು.  ಸದ್ಯದ ಸಂದರ್ಭದಲ್ಲಿ ವಚನ ಸಾಹಿತ್ಯಜನ ಮನವನ್ನು ಕಟ್ಟುವ ಕೆಲಸವನ್ನು ಮಾಡುತ್ತಿದೆ. ಇದೊಂದು ಬಹು ಪ್ರಮುಖವಾದ ಬೆಳವಣಿಗೆ ಎನ್ನಬಹುದು ಎಂದರು.

ಅನೇಕ ಆಧುನಿಕಚಿತ್ರಕಲಾವಿದರು ವಚನಗಳನ್ನು ಆಧರಿಸಿ ಶರಣರ ಬದುಕನ್ನು ದರ್ಶನೀಕರಿಸಿರುವುದು ನಿಜಕ್ಕೂ ಮೆಚ್ಚುವಂತಹಕಾರ್ಯವೆಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣಬಸವ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ನಿರಂಜನ್ ನಿಷ್ಠಿಯವರು ಶರಣರ ವ್ಯಕ್ತಿತ್ವಅಭೂತಪೂರ್ವವಾದುದುಒಬ್ಬರಿಗಿಂತ ಮತ್ತೊಬ್ಬರು ಮಿಗಿಲು ಎನ್ನುವಂತೆಅವರುತಮ್ಮ ಸಾಧನೆಗಳ ಮೂಲಕ ಬೆಳೆದು ನಿಂತಿದ್ದರು. ಇದರಿಂದಾಗಿಯೇ ಇಂದಿಗೂ ಅವರು ನಮಗೆ ಆದರ್ಶಪ್ರಾಯರುಎಂದರು.

ಇದೇ ಸಂದರ್ಭದಲ್ಲಿಚೈತನ್ಯಮಯಿಆರ್ಟ್‌ಗ್ಯಾಲರಿ ವತಿಯಿಂದ ಚೈತನ್ಯಶ್ರೀ ಕಲಾಪ್ರಶಸ್ತಿ-೨೦೧೯ನ್ನು ಲಿಂ.  ಬಸವರಾಜ ಮುಗಳಿ ಮುಕ್ಕಾಂ ಹುಡಗಿಇವರಿಗೆ  ಪ್ರದಾನ ಮಾಡಲಾಯಿತು.  ಅವರ ಪತ್ನಿ ಶ್ರೀಮತಿ ಸಾವಿತ್ರಿಬಾಯಿ ಮುಗಳಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ವೇದಿಕೆಯ ಮೇಲೆ ಕಲಬುರಗಿ ಬಸವ ಸಮತಿಯಅಧ್ಯಕ್ಷರಾದಡಾ. ವಿಲಾಸವತಿ ಖೂಬಾ, ಡಾ. ಬಿ. ಡಿ.  ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಕೇಂದ್ರದ ನಿರ್ದೇಶಕರಾದಡಾ. ವೀರಣ್ಣದಂಡೆ,ದತ್ತಿ ದಾಸೋಹಿಗಳಾದ ಡಾ. ಎ. ಎಸ್.  ಪಾಟೀಲ, ಶ್ರೀಮತಿ ಕಾಂತಾಬಾಯಿ ಪಾಟೀಲ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಎಚ್. ಕೆ. ಉದ್ದಂಡಯ್ಯಕಾರ್ಯಕ್ರಮ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here