ಭ್ರಷ್ಟಾಚಾರ ನಡೆಸಿದ ಕಾಡಾ ಆಡಳಿತಾಧಿಕಾರಿ ಅಮಾನತ್ತುಗೊಳಿಸಿ-ವೆಂಕೋಬ ದೊರೆ

0
126

ಸುರಪುರ: ಭೀಮರಾಯನಗುಡಿ ಆಡಳಿತಾಧಿಕಾರಿ ವಿ.ಕೆ.ಪೋತದಾರ ಮತ್ತು ಇನ್‌ಚಾರ್ಜ ಎಸ್.ಇ ಜಗನ್ನಾಥರವರನ್ನು ಸರಕಾರ ಕೂಡಲೆ ಅಮಾನತ್ತುಗೊಳಿಸುವಂತೆ ಒತ್ತಾಯಿಸಿದರು.

ನಗರದ ಬಸ್ ನಿಲ್ದಾಣದ ಬಳಿ ಹೆಚ್.ಡಿ.ಕುಮಾರಸ್ವಾಮಿ ಸೇನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಭೀಮರಾಯನಗುಡಿ ಆಡಳಿತಾಧಿಕಾರಿ ಪೋತದಾರರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭೀವೃಧ್ದಿಗಾಗಿ ಬಂದ ಅನುದಾನ ದುರುಪಯೋಗಪಡಿಸಿದ್ದಾರೆ.ಅಲ್ಲದೆ ಇಲಾಖೆಯಿಂದ ರೈತರಿಗೆ ಯಾವುದೆ ಉಪಯೋಗವಾಗುವ ಕೆಲಸಗಳ ಮಾಡಿಲ್ಲ,ಇದನ್ನು ಸರಕಾರದ ಗಮನಕ್ಕೆ ತಂದಿದದ್ದರಿಂದ ಪೋತದಾರರ ಜಾಗದಲ್ಲಿ ಇನ್‌ಚಾರ್ಜ ಎಸ್.ಇ ಜಗನ್ನಾಥರನ್ನು ನೇಮಿಸಲಾಗಿದೆ,ಆದರೆ ಇವರುಕೂಡ ಸರಿಯಾಗಿ ಕೆಲಸ ನಿರ್ವಹಿಸದೆ ಪೋತದಾರರಿಗೆ ಬೆಂಬಲಿಸುತ್ತಿದ್ದಾರೆ.ಆದ್ದರಿಂದ ಸರಕಾರ ಕೂಡಲೆ ಈ ಇಬ್ಬರು ಅಧಿಕಾರಿಗಳನ್ನು ಅಮಾನತ್ತುಗೊಳಿಸುವಂತೆ ಒತ್ತಾಯಿಸಿದರು.

Contact Your\'s Advertisement; 9902492681

ಕಾಡಾ ನಿರ್ದೇಶಕರಿಗೆ ಬರೆದ ಮನವಿಯನ್ನು ತಹಸೀಲ್ ಕಚೇರಿ ಸಿರಸ್ತೆದಾರ ಪ್ರವೀಣಕುಮಾರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಗೋಪಾಲ ಬಾಗಲಕೋಟೆ,ಮಾನಯ್ಯ ದೊರೆ,ಕೃಷ್ಣಾ ದಿವಾಕರ,ಕೇಶಣ್ಣ ದೊರೆ,ಬಸವರಾಜ ಕವಡಿಮಟ್ಟಿ,ದೇವಪ್ಪ ದೇವರಮನಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here