ಕಲಬುರಗಿ: ಪ್ರಾಮಾಣಿ ದಕ್ಷ ಹಾಗೂ ನೈತಿಕತೆಹೊಂದಿದ ಫರಹತಾಬಾದ ಪೊಲೀಸ್ ಠಾಣೆ ಪಿಎಸ್.ಐ ಆಗಿ ಬಡ್ತಿಗೊಂಡ ಯಶೋಧ ಕಟಕೆ ಅವರಿಗೆ ಕಲಬುರಗಿ ತಾಲೂಕು ಕಸಾಪ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.
ಫರಹತಾಬಾದ ಹತ್ತಿರವಿರುವ ತಪೊನಿಧಿ ಸಾಂಬ ಶಿವಯೊಗೀಶ್ವರ ಮಠದಲ್ಲಿ ಪೂಜ್ಯ ಶ್ರೀ ಷ,ಬ್ರ. ತಪೋರತ್ನ ದ್ವೀತಿಯ ಸಾಂಬ ಶಿವಯೋಗಿ ಶಿವಾಚಾರ್ಯರು ಸಂಸ್ಥಾನ ಹಿರೇಮಠ ವಿ.ಕೆ.ಸಲಗರ ಅವರನ್ನು ಭೇಟಿ ನೀಡಿ ಸಾಹಿತ್ಯದ ಕುರಿತು ಚರ್ಚಿಸಲಾಯಿತು ಎಂದು ಕಸಾಪ ತಾಲೂಕು ಅಧ್ಯಕ್ಷ ಸಿ.ಎಸ್.ಮಾಲಿ ಪಾಟೀಲ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಿವಕವಿ ಜೋಗುರು, ಕಸಾಪ ಮಹಿಳಾ ಪ್ರತಿನಿಧಿ ರೇಣುಕಾ ಡಾಂಗೆ, ವೀರಸಂಗಪ್ಪ, ಸುಲೆಗಾಂವ, ಪರಿಷತ್ತಿನ ಇದ್ದರು.