ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ

0
48

ಕಲಬುರಗಿ: ಕುಸನೂರ ಗ್ರಾಮದ ಕನಕ ಭವನದಲ್ಲಿ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕರು ಮಾಜಿ ಮುಖ್ಯಮಂತ್ರಿಗಳು ಹಾಲಿ, ವಿರೋಧ ಪಕ್ಷದ ನಾಯಕರಾದ, ಸಿದ್ದರಾಮಯ್ಯನವರ ಜನ್ಮದಿನ ಪ್ರಯುಕ್ತ ಕಾಂಗ್ರೆಸ್ ಮುಖಂಡ ಕುಪೆಂದ್ರ ಎಮ್.ಬರಗಾಲಿ ನೇತೃತ್ವದಲ್ಲಿ ೨೦೨೦ನೇ ಸಾಲಿನ ಪಿ.ಯು.ಸಿ. ದ್ವಿತೀಯ ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಭಾಗೇಶ ತಂದೆ ಬಸವರಾಜ ಮುಗಳಾಗಾಂವ (ಶೆ. ೯೯.೨), ೧೦ನೇ ತರಗತಿಯಲ್ಲಿ ಹೆಚ್ಚು ಅಂಕಗಳಿಸಿದ ಕುಮಾರಿ. ಕಾವ್ಯ ವಿಠಲ್ ಬರಗಾಲಿ (ಶೇ.೯೩.೪೪), ಪಿಯುಸಿ ದ್ವೀತಿಯ ಅತಿ ಹೆಚ್ಚು ಅಂಕಗಳಿಸಿದ ಕುಮಾರಿ. ಅಕ್ಷತಾ ಲಕ್ಷ್ಮಣ ಸನಗುಂದಿ (ಶೇ.೯೩.), ಪಿಯುಸಿ ದ್ವೀತಿಯ ವರ್ಷದ ಕು. ಕಿರಣ ಶಿವಪ್ಪ ವಚ್ಚಾ (ಶೇ.೮೮), ೧೦ನೇಯ ತರಗತಿಯಲ್ಲಿ ಕುಮಾರಿ ಉಷಾ ಮಾಳಪ್ಪ ಕುಡಕಿ (ಶೇ.೮೭.), ಇವರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

Contact Your\'s Advertisement; 9902492681

ಈ ಕಾರ್ಯಕ್ರಮದಲ್ಲಿ ಅರುಣಕುಮಾರ ಬಿ.ಕುರ್ಣಿ, ವಿಜಯಕುಮಾರ ಇಟಗಿ, ಸೋಮಶೇಖರ ಮಾಲಿಪಾಟೀಲ್, ರಮೇಶ ತೆಗ್ಗಿನಮನಿ, ಸಿದ್ದು ತಳವಾರ, ಮಾಳಿಂಗರಾಯ ಬಿ.ಬರಗಾಲಿ, ಕುಸನೂರ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here