ಮನೆಗೆ ಅನಾಮಧೇಯ ಬೀಜದ ಚೀಲ ಬಂದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ಕೊಡಿ

0
62

ಕಲಬುರಗಿ: ಜಿಲ್ಲೆಯಲ್ಲಿ ಕೆಲವಡೆ ರೈತರ ವಿಳಾಸಕ್ಕೆ ಅನಾಮಧೇಯ ಬೀಜದ ಚೀಲಗಳನ್ನು ಬಂದಿರುವುದು ತಿಳಿದು ಬಂದಿದ್ದು, ಇದರ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಬಹಳಷ್ಟು ಎಚ್ಚರಿಕೆವಹಿಸಿ ಆಕಸ್ಮಿಕವಾಗಿ ಇಂತಹ ಪಾರ್ಸಲ್ ಚೀಲಗಳು ಬಂದಲ್ಲಿ ಅವುಗಳನ್ನು ಒಡೆಯದೆ ತಮ್ಮ ಸಮೀಪದ ಕೃಷಿ ಇಲಾಖೆಯ ಕಚೇರಿಗೆ ಅಥವಾ ಪೆÇಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸುಗೂರ ತಿಳಿಸಿದ್ದಾರೆ.

ಕಳೆದ ವಾರವμÉ್ಟೀ ಚೀನಾ ದೇಶದಿಂದ ಈ ರೀತಿಯ ಪಾರ್ಸಲ್ ಚೀಲಗಳು ಬರುತ್ತಿವೆ ಎಂಬುದಾಗಿ ಸುದ್ದಿ ವಾಹಿನಿಗಳಿಂದ ವಿಷಯ ತಿಳಿದು ಬಂದಿರುತ್ತದೆ. ಈ ಚೀಲಗಳಲ್ಲಿ ಬೀತನೆ ಬೀಜ ಹೊರತುಪಡಿಸಿ ರೋಗ ಹರಡುವ ವೈರಾಣುಗಳು ಅಥವಾ ಇನ್ನಿತರ ಮಾರಕ ಪದಾರ್ಥಗಳು ಕಳುಹಿಸಲಾಗುತ್ತಿದೆ ಎಂದು ಶಂಕಿಸಲಾಗಿದೆ.

Contact Your\'s Advertisement; 9902492681

ಹೀಗಾಗಿ ಈ ಪಾರ್ಸಲ್ ಚೀಲಗಳನ್ನು ತಂದು ಕೊಟ್ಟವರ ಹೆಸರು, ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ರೈತರು ಪಡೆದು ಈ ಕುರಿತು ಪೆÇಲೀಸರಿಗೆ ದೂರನ್ನು ಸಲ್ಲಿಸಬೇಕು. ಇದರಿಂದ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ರೈತರು ಕೃಷಿ ಇಲಾಖೆಗೆ ಹಾಗೂ ಸರ್ಕಾರಕ್ಕೆ ಸಹಕಾರ ನೀಡಬೇಕೆಂದು ಅವರು ಕೋರಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here