ಡಾ: ಈಶ್ವರಯ್ಯ ಮಠಗೆ ಹುಟ್ಟೂರಲ್ಲಿ ಗೆಳೆಯರ ಬಳಗದಿಂದ ಶ್ರದ್ಧಾಂಜಲಿ

0
141

ಸುರಪುರ: ಇತ್ತೀಚೆಗೆ ನಿಧನರಾದ ಹಿರಿಯ ಸಾಹಿತಿ ಹಾಗು ವೈಚಾರಿಕ ಚಿತಂಕ ಡಾ: ಈಶ್ವರಯ್ಯ ಮಠ ಅವರಿಗೆ ಹುಟ್ಟೂರು ದೇವರಗೋನಾಲದಲ್ಲಿ ದೇವರಗೋನಾಲ ಗೆಳೆಯರ ಬಳಗ ಹಾಗು ನೌಕರರ ಬಳಗದ ವತಿಯಿಂದ ಶ್ರದ್ಧಾಂಜಲಿ ಸಭೆ ನಡೆಸಲಾಯಿತು.

ಸಭೆಯ ಆರಂಭದಲ್ಲಿ ಡಾ:ಈಶ್ವರಯ್ಯ ಮಠ ಮತ್ತು ಇತ್ತೀಚೆಗೆ ನಿಧನರಾದ ಇನ್ನಿಬ್ಬರು ಮಹನಿಯರುಗಳಾದ ಯಾದಗಿರಿ ಏಕದಂಡಗಿ ಮಠದ ಶ್ರೀ ಗುರುನಾಥೇಶ್ವರ ಸ್ವಾಮೀಜಿ ಹಾಗು ನಿವೃತ್ತ ಶಿಕ್ಷಕ ಲಿಂಗಣ್ಣ ಲಕಣಾಪುರ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.

Contact Your\'s Advertisement; 9902492681

ನಂತರ ಸರಕಾರಿ ಜಿಲ್ಲಾ ಅಭಿಯೋಜಕರಾದ ಹೆಚ್.ಎನ್.ಬಳಬಟ್ಟಿ ಮಾತನಾಡಿ,ಈಶ್ವರಯ್ಯ ಹಿರೇಮಠ ಅವರು ನಮ್ಮೂರಿನ ಮಗ ಅಷ್ಟೆ ಅಲ್ಲದೆ ಇಡೀ ಸಗರನಾಡಿನ ಹೆಮ್ಮೆಯ ಮಗನಾಗಿದ್ದರು.ಅವರ ಸಾಹಿತ್ಯ ಓದು ಭಾಷಣ ಬರಹ ನಡೆಸಿದ ಗೋಷ್ಠಿಗಳು ಸಮಾರಂಭಗಳು ಎಲ್ಲವನ್ನೂ ನೆನೆದು ಅವರು ನಮ್ಮೂರಿನ ಆಲದ ಮರದಂತಿದ್ದರು ಎಂದು ಭಾವುಕರಾಗಿ ನುಡಿದರು.

ಅದೇರೀತಿಯಾಗಿ ಮೊನ್ನೆ ನಿಧನರಾದ ಏಕದಂಡಗಿ ಮಠದ ಶ್ರೀ ಗುರುನಾಥೇಶ್ವರ ಸ್ವಾಮೀಜಿ ಹಾಗು ನಿವೃತ್ತ ಶಿಕ್ಷಕರಾಗಿದ್ದ ಲಿಂಗಣ್ಣ ಲಕಣಾಪುgರ ಕುರಿತು ಮಾತನಾಡಿ,ಲಿಂಗಣ್ಣ ಲಕಣಾಪುರ ಅವರು ನೇರ ನುಡಿಯ ನೇರ ನಡೆಯ ವ್ಯಕ್ತಿಯಾಗಿದ್ದರು.ಸದಾಕಾಲ ಸತ್ಯವನ್ನೆ ನುಡಿದು ಎಲ್ಲರಿಗು ಮಾದರಿಯಾಗಿದ್ದರು.ಅವರು ನಮ್ಮೂರನ್ನು ತಿದ್ದಿದ ಮೊದಲ ಶಿಕ್ಷಕರು ಅಂತವರನ್ನು ಕಳೆದುಕೊಂಡ ದುಃಖ ನಮ್ಮನ್ನು ಬಾಧಿಸುತ್ತದೆ ಎಂದರು.

ನಂತರ ಸಭೆಯಲ್ಲಿದ್ದ ಮೋನಪ್ಪ ಕಳಸರ್ ಮಹಾಂತೇಶ ಗೋನಾಲ ಭೀಮರಾಯ ಮಲ್ಲಾಪುರ ನಿಂಗಣ್ಣ ಗೋನಾಲ ಕೆ.ಎಸ್.ಈಶ್ವರ ಕೆರಿಕೋಡಿ ಭೀಮಣ್ಣ ಕೂಡ್ಲೂರು ಶಾಂತಪ್ಪ ಕಳಸರ್ ಸುರೇಶ ಕಿರದಳ್ಳಿ ಮಾತನಾಡಿದರು.ನಂತರ ಎರಡು ನಿಮಿಷಗಳ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಅರ್ಪಿಸಿದರು.

ಸಭೆಯಲ್ಲಿ ನಿಂಗಣ್ಣ ಕಮತಗಿ ವಿನೋದ ಕೊಂಗಂಡಿಕರ್ ಮಲ್ಲು ಪಾಟೀಲ್ ಗುರು ಲಕಣಾಪುರ ಭೀಮು ಕೊಂಗಂಡಿಕರ್ ಅನಿಲ್ ಶಹಾಪುರಕರ್ ಸೋಮು ಮಾಲಿಂಗ ಗೋನಾಲ ಹಾಗು ದೇವರಗೋನಾಲ ಗೆಳೆಯರ ಬಳಗ ಮತ್ತು ನೌಕರರ ಬಳಗದ ಸದಸ್ಯರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here