ವಿದ್ಯುತ್ ತಂತಿ ಬೇಲಿ ತಗುಲಿ ರೈತರಿಬ್ಬರ ಸಾವು

0
120

ಆಳಂದ: ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಬೇಲಿಯ ತಂತಿ ತಗುಲಿ ರೈತರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದಲ್ಲಿ ನಡೆದಿದೆ.

ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದ ನಿವಾಸಿ, ಸಿದ್ದಾರಾಮ ಪೂಜಾರಿ(58) ಹಾಗೂ ಅಮೃತರಾಯ ಚಿಂಚೋಳಿ(55) ಎಂಭಾತರೆ ಮೃತಪಟ್ಟಿರುವ ದುರ್ದೈವಿಗಳಾಗಿದ್ದಾರೆಂದು ಪೊಲೀಸ್ರು ತಿಳಿಸಿದ್ದಾರೆ. ಕುಲಾಲಿ ರಸ್ತೆಯಲ್ಲಿರುವ ಸಿದ್ದಾರಾಮ ಪೂಜಾರಿ ಎಂಬುವವರಿಗೆ ಸೇರಿದ ಜಮೀನಿಗೆ ತಮ್ಮ ಆಳು ಮನುಷ್ಯ ಅಮೃತನೊಂದಿಗೆ ಸಿದ್ದಾರಾಮ ಹೋಗಿದ್ದರು.

Contact Your\'s Advertisement; 9902492681

ಹಂದಿಗಳ ಕಾಟ ತಡೆಯಲೆಂದು ಕಬ್ಬಿನ ಗದ್ದೆಯ ಸುತ್ತಲೂ ವಿದ್ಯುತ್ ಬೇಲಿಯನ್ನು ಹಾಕಿದ್ದರು.ಈ ಬೇಳೆ ಗದ್ದೆಯ ಬಂದಾರಿನಲ್ಲಿ ಖುರ್ಪಿ ಹಿಡಿದ ಇಬ್ಬರು ಕೆಲಸಕ್ಕೆ ಮುಂದ್ದಾಗಿದ್ದಾಗ ಏಕಾಏಕಿ ವಿದ್ಯುತ್ ಬೇಲಿಯ ತಂತಿ ತಗುಲಿ ಸಿದ್ದಾರಾಮ ಹಾಗೂ ಅಮೃತ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆಂದು ಪೊಲೀಸ್ ರು ತಿಳಿಸಿದ್ದಾರೆ.

ಈ ಕುರಿತು ಸುದ್ದಿ ಅರಿತ ನಿಂಬರ್ಗಾ ಠಾಣೆ ಪಿಎಸಐ ಸುರೇಶ್ ಕುಮಾರ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ,ಸ್ಥಳವನ್ನು ಪರಿಶೀಲಿಸಿ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆಂದು ತಿಳಿಸಿದ್ದಾರೆ.ಈ ಕುರಿತು ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here