ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕಲಿಸಿದ್ದು ನಾರಾಯಣ ಗುರು-ಶರಣಗೌಡ ಪಾಟೀಲ

0
141

ಶಹಾಬಾದ:ಹಿಂದುಳಿದ ಸಮಾಜ ಮುನ್ನೆಲೆಗೆ ಬರಬೇಕಾದರೆ ಅದು ವಿದ್ಯೆಯಿಂದ ಮಾತ್ರ ಸಾಧ್ಯ ಎಂಬ ಸಂದೇಶವನ್ನು ನೂರಾರು ವರ್ಷಗಳ ಹಿಂದೆ ಬ್ರಹ್ಮರ್ಷಿ ನಾರಾಯಣ ಗುರುಗಳು ನೀಡಿದ್ದಾರೆ ಎಂದು ಕಸಾಪ ಕಲಬುರಗಿ ಗ್ರಾಮೀಣ ಅಧ್ಯಕ್ಷ ಶರಣಗೌಡ ಪಾಟೀಲ ಹೇಳಿದರು.

ಅವರು ನಗರದ ಹಳೆಶಹಾಬಾದನಲ್ಲಿ ಆರ್ಯ ಈಡಿಗ ಸಮಾಜದ ವತಿಯಿಂದ ಬುಧವಾರ ಆಯೋಜಿಸಲಾದ ಬ್ರಹ್ಮರ್ಷಿ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

Contact Your\'s Advertisement; 9902492681

ನಾರಾಯಣ ಗುರುಗಳು ಸಮಾಜದಲ್ಲಿನ ಅಸಮಾನತೆ ತೊಡೆದು ಹಾಕಲು ಶಿಕ್ಷಣದ ಮಹತ್ವ ತಿಳಿಸುವ ಕೆಲಸ ಮಾಡಿದ್ದರು.ಅವರ ಒಂದು ಮಾರ್ಗದರ್ಶನದಿಂದ ಇಂದು ಅನೇಕ ಸಣ್ಣ ಪುಟ್ಟ ಸಮಾಜ ಅಕ್ಷರ ಕಲಿತು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.

ಮಾಜಿ ನಗರಸಭೆಯ ಸದಸ್ಯ ಶ್ರೀಶೈಲ ಬೆಳಮಗಿ ಪೂಜೆ ಸಲ್ಲಿಸಿದರು.ಆರ್ಯ ಈಡಿಗ ಸಮಾಜದ ಅಧ್ಯಕ್ಷ ಭೀಮಯ್ಯ ಗುತ್ತೆದಾರ,ಆರ್ಯ ಈಡಿಗ ಸಮಾಜದ ಗೌರಾವಾಧ್ಯಕ್ಷ ಭಗವಾನ ಗುತ್ತೆದಾರ, ಉಪಾಧ್ಯಕ್ಷ ಅಶೋಕ ಗುತ್ತೆದಾರ,ಮಲ್ಲಿಕಾರ್ಜುನ ಪೂಜಾರಿ,ಶಿವಕುಮಾರ ನಾಟೀಕಾರ,ಶರಣಪ್ಪ ಕೊಡದೂರ,ಅಣವೀರದ್ಯಾಮಾ, ಬಾಲಾಜಿ ಗುತ್ತೆದಾರ,ವಾಜೀದ ಜಮಾದಾರ, ಸ್ನೇಹಲ್ ಜಾಯಿ, ಸುರೇಶ ಅಪಕಾರಿ, ಸಾಯಿಕುಮಾರ ಗುತ್ತೆದಾರ, ಕಾಶಿನಾಥ ಗುತ್ತೆದಾರ, ಶಂಕರ ಗುತ್ತೆದಾರ, ಮಲ್ಲಿಕಾರ್ಜುನ ಗುತ್ತೆದಾರ, ಮಲ್ಲಿಕಾಜರ್ುನ ಗುತ್ತೆದಾರ, ಯಂಕಯ್ಯ ಗುತ್ತೆದಾರ, ವಿಶ್ವರಾಧ್ಯ ಗುತ್ತೆದಾರ, ಸಾಬಯ್ಯ ಗುತ್ತೆದಾರ, ಉತ್ತಮ ಗುತ್ತೆದಾರ, ಭೀಮಾಶಂಕರ ಗುತ್ತೆದಾರ,ಮಲ್ಲಿಕಾಜರ್ುನ ಅಪಕಾರಿ ಇತರರು ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here