ವೀರಣ್ಣ ತಳವಾರಗೆ ರಾಜೀವ್ ಗಾಂಧಿ ಪ್ರಶಸ್ತಿ

0
29

ಶಹಾಪುರ : ಕಲಬುರಗಿಯ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ಹಾಗೂ ಪರಿಸರ ಸ್ನೇಹಿ ಜೊತೆಗೆ ಕ್ರಿಯಾಶೀಲರಾದ ವೀರಣ್ಣ ತಳವಾರ ಅವರಿಗೆ ಬೆಂಗಳೂರಿನ ಗ್ಲೋಬಲ್ ಇಂಟರ್ನ್ಯಾಷನಲ್ ಪೀಸ್ ಅಂಡ್ ಎಜುಕೇಷನ್ ಯುನಿವರ್ಸಿಟಿ ವತಿಯಿಂದ ರಾಜೀವ್ ಗಾಂಧಿ ಎಕ್ಸಲೆನ್ಸಿವ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಯಿತು.

ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಅಧಿಕಾರಿಯಾದ ಡಾ. ರುದ್ರವಾಡಿ ಅವರು ಮಾತನಾಡಿ ಕೇವಲ ವೇತನಕ್ಕಾಗಿ ಕೆಲಸ ಮಾಡದೆ ನೊಂದವರ ಧ್ವನಿಯಾಗಿ ಸಾಮಾಜಿಕ ಕಳಕಳಿಯಿಂದ ಜವಾಬ್ದಾರಿಯಾಗಿ ಕೆಲಸ ಮಾಡಬೇಕು ಎಂದು ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದರು.

Contact Your\'s Advertisement; 9902492681

ವೀರಣ್ಣ ತಳವಾರ ಅವರ ಸಾಮಾಜಿಕ ಕಾರ್ಯ ಪರಿಸರ ಕುರಿತು ಅವರಿಗಿರುವ ಅಪಾರ ಕಾಳಜಿ ಮನಗಂಡು ಈ ಪ್ರಶಸ್ತಿ ನೀಡಿರುವುದು ನಮಗೆ ತುಂಬಾ ಸಂತೋಷವನ್ನುಂಟು ಮಾಡಿದೆ ಎಂದು ಈ ಸಂದರ್ಭದಲ್ಲಿ ನುಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here