ದಿನ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಡಿತಕ್ಕೆ ಆಗ್ರಹಿಸಿ ಪ್ರತಿಭಟನೆ

0
40

ಕಲಬುರಗಿ: ದಿನ ನಿತ್ಯ ಬಳಸುವ ಆಹಾರ ಸಾಮಗ್ರಿಗಳ ಬೆಲೆ ದುಬಾರಿ ಆದಕಾರಣ ಗ್ರಾಹಕರು ಕಂಗಾಲು ಬೆಲೆ ಕಡಿಮೆಗೆ ಒತ್ತಾಯಿಸಿ ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಯಾ ಸವೇರಾ ಸಂಘಟನೆಯಿಂದ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗಳಿಗೆ ಆಗ್ರಹಿಸಿದರು.

ಈ ವೇಳೆಯಲ್ಲಿ ಸಂಘಟನೆ ಅಧ್ಯಕ್ಷರಾದ ಮೋದಿನ್ ಪಟೇಲ ಅಣಬಿ ಮಾತನಾಡಿ, ಲಾಕ್ ಡೌನ್ ತೆರವು ಬಳಿಕ ದಿನಸಿ ವಸ್ತುಗಳ ಬೆಲೆ ಇಳಿಕೆಯಾಗಲಿದೆ ಎಂಬ ಜನರ ನಂಬಿಕೆ ಹುಸಿಯಾಗಿದೆ. ಆರ್ಥಿಕ ಸಮಸ್ಯೆಗಳ ನಡುವೆಯೂ ಬೆಲೆ ಏರಿಕೆ ಯಾಗುತ್ತಿರುವುದು ಕುಟುಂಬದ ಮೇಲೆ ಬರೆ ಹಾಕಿದಂತಾಗಿದೆ. ಮೂರು ತಿಂಗಳ ಬಳಿಕ ನಾನಾ ಕಡೆಗಳಲ್ಲಿ ಸಂಭವಿಸಿದ ಅತಿವೃಷ್ಟಿ-ಅನಾವೃಷ್ಟಿ ಎಫೆಕ್ಟ್ ನಿಂದಾಗಿ ಸಾಗಾಣಿಕೆಗೆ ಅಡೆತಡೆ ಉಂಟಾಯಿತು. ಮಾರುಕಟ್ಟೆಗೆ ಬರಬೇಕಿದ್ದ ದವಸಧಾನ್ಯಗಳು ಬಂದು ತಲುಪಲಿಲ್ಲ ಅದಕ್ಕಾಗಿ ಬೆಲೆ ಏರಿಕೆ ತುಂಬಾ ಜಾಸ್ತಿ ಆಯ್ತು ಕಳೆದ ಹದಿನೈದು ದಿನಗಳ ಹಿಂದೆ ಸಾಮಾನ್ಯ ಅಡುಗೆ ದರ 1ಕೆಜಿ ರೂ.20 ಹೆಚ್ಚಳವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಪೆಟ್ರೋಲ್ ಡೀಸೆಲ್ ದರ ದಿನನಿತ್ಯ ಏರುತ್ತಲೇ ಇದೆ. ಮಿಲ್ ಮತ್ತು ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಕೆಲಸವಿಲ್ಲವೇ ಬೇರೆ ಕಡೆ ಹೋಗಿ ಜೀವನ ನಡೆಸುತ್ತಿದ್ದಾರೆ. ಇದರ ಪರಿಣಾಮ ದಿನಸಿ ಪದಾರ್ಥಗಳ ಮೇಲೆ ಬೀಳುತ್ತಿದೆ. ಉತ್ಪಾದನೆ ಕಂಪನಿಗಳ ಕೆಲಸಗಳು ಮಂದಗತಿಯಲ್ಲಿ ನಡೆಯುತ್ತಲಿವೆ. ಕಾರ್ಮಿಕರು ಕೋರೋನಾ ರೋಗಕ್ಕೆ ಭಯಗೊಂಡು ತಮ್ಮ ತಮ್ಮ ಊರುಗಳಿಗೆ ತೆರಳಿದ್ದು, ಇದರಿಂದ ಕಂಪನಿಗಳಿಗೆ ಕಾರ್ಮಿಕರು ಕೊರತೆಯಾಗಿದೆ. ದಿನಸಿಗಳ ಪ್ಯಾಕಿಂಗ್ ಮಾಡುವುದು ಕಡಿಮೆಯಾಗಿದೆ. ತೊಗರಿ ಬೆಳೆ ದರದಲ್ಲಿ ಕನಿಷ್ಠ 10 ಪರ್ಸೆಂಟ್ ರೂ. ಹೆಚ್ಚಳವಾಗಿದೆ ಎಂದು ತಿಳಿಸಿದರು.

ಜನರ ಕಷ್ಟವನ್ನು ಅರಿತು ದಿನಸಿ ಪದಾರ್ಥ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಕಡಿತಗೊಳಿಸಿ ಸಂಘಟನೆ ಸದಸ್ಯರ ಸಮುಖದಲ್ಲಿ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಲೀಂ ಅಹಮದ್ ಚಿತಾಪುರ್, ಸೈರಾ ಬಾನು ಅಬ್ದುಲ್ ವಾಹಿದ್, ಗೀತಾ ಮುದುಗಲ್, ರಾಬಿಯಾ ಶಿಕಾರಿ, ಬಾಬಾ ಫಕ್ರುದ್ದಿನ್ ಅನ್ಸಾರಿ, ಮುಬಿನ್ ಅನ್ಸಾರಿ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here