ಈ ದೇಶದ ಪ್ರಜೆಗುಕೂಡ ಅಂಬೇಡ್ಕರ್ ಸ್ಪೂರ್ತಿ: ಶಿವಕುಮಾರ ತಳವಾರ

0
111

ಶಹಾಪುರ:  ತಾಲೂಕಿನ ಶಿರವಾಳ ಗ್ರಾಮದಲ್ಲಿ ಜೀ ಕನ್ನಡ ಮುಖಾಂತರ ಪ್ರಸಾರವಾಗುತ್ತಿರುವ ಮಹಾನ್ ನಾಯಕ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಅನಾವರಣವನ್ನು ನಗರಸಭೆ ಸದಸ್ಯರಾದ ಶಿವಕುಮಾರ್ ತಳವಾರ್ ಅವರು ಹಾಗೂ ಯುವ ಮುಖಂಡರಾದ ನಿಜಗುಣ ದೋರನಹಳ್ಳಿ ಅವರು ನೆರವೇರಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಡಾ. ಬಿಆರ್ ಅಂಬೇಡ್ಕರ್ ಅವರು ಕೇವಲ ಒಂದು ವರ್ಗಕ್ಕೆ ಸೀಮಿತ ಆದವರಲ್ಲ ಇಡೀ ದೇಶದ ಪ್ರತಿಯೊಬ್ಬ ಪ್ರಜೆಗೂ ಕೂಡ ಅಂಬೇಡ್ಕರವರ ಸ್ಫೂರ್ತಿ ಎಂದು ಶಿವಕುಮಾರ್ ತಳವಾರ್ ಅವರು ತಿಳಿಸಿದರು ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ನಾವು ನೀವು ಎಲ್ಲರೂ ಕೂಡ ಧಾರವಾಹಿ ಮುಖಾಂತರ ನೋಡಿ ನಾವೆಲ್ಲರೂ ಅವರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಶಿವಕುಮಾರ್ ಅವರು ತಿಳಿಸಿದರು.

Contact Your\'s Advertisement; 9902492681

ನಿಜಗುಣ ದೋರನಹಳ್ಳಿ ಅವರು ಮಾತನಾಡಿ ಡಾ. ಅಂಬೇಡ್ಕರ್ ಅವರು ಬರೆದಿರುವಂತಹ ಸಂವಿಧಾನ ಕೇವಲ ಒಂದು ವರ್ಗಕ್ಕೆ ಸೀಮಿತವಾದವರಲ್ಲಾ ಈ ದೇಶದ ಪ್ರತಿಯೊಬ್ಬ ನಾಗರಿಕರಿಗೆ ರಾಜಕೀಯವಾಗಿ ಶೈಕ್ಷಣಿಕವಾಗಿ ಎಲ್ಲಾ ರಂಗದ ಅವಕಾಶಗಳನ್ನು ಸಂವಿಧಾನದಲ್ಲಿ ಕಲ್ಪಿಸಲಾಗಿದೆ ಎಂದು ನಿಜಗುಣ ದೋರನಹಳ್ಳಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ರಾಮಣ್ಣ ಸದ್ಯಾಪೂರ್, ಮರೆಪ್ಪ ಜಾಲಿಮಂಚಿ, ಭೀಮರಾಯ ಜುನ್ನಾ, ಶಿವು ಆಂದೋಲಾ, ರಾಯಪ್ಪ ಸಾಲಿಮನಿ, ಬಲಬೀಮ ನಡವಿನಕೆರಿ, ಶಿವಪ್ಪ ಮಕ್ತಾಪೂರ, ಮರೆಪ್ಪ ಬಂಡಾರಿ ಹಾಗೂ ಗ್ರಾಮದ ಅನೇಕ ಮುಖಂಡರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here