ಶರಣಬಸವ ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

0
139

ಕಲಬುರಗಿ: ನಗರದ ಶರಣಬಸವ ವಿಶ್ವ ವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಎಂ.ಎ. ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ವನ್ನು ತೃತೀಯ ಸೆಮಿಸ್ಟರ್ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾಗಿತ್ತು.

ಈ ಸಮಾರಂಭದ ಅಧ್ಯಕ್ಷತೆಯನ್ನು ವಿಭಾಗದ ಮುಖ್ಯಸ್ಥರಾದ ಟಿ.ವಿ.ಶಿವಾನಂದ್ ರವರು ವಹಿಸಿ ಮಾತನಾಡಿದ್ದರು.

Contact Your\'s Advertisement; 9902492681

ವಿಭಾಗದ ಸಹಾಯಕ ಪ್ರಾಧ್ಯಾಪಕರುಗಳಾದ ಶ್ರೀಮತಿ ಅಶ್ವಿನಿ ರೆಡ್ಡಿ, ಡಾ.ಸುನಿತಾ ಪಾಟೀಲ್, ಶ್ರೀಮತಿ ನಿರ್ಮಲಾ ದೊರೆ, ಪತ್ರಕರ್ತ ಸುಭಾಷ್ ಬಣಗಾರ, ಅನಿತಾ ಗಾಯಕ್ವಾಡ್, ವೇದಿಕೆ ಮೇಲಿದ್ದರು.

ಕಾರ್ಯಕ್ರಮವು ಪ್ರಾರ್ಥನಾ ಗೀತೆ ಯೊಂದಿಗೆ ಪ್ರಾರಂಭವಾಯಿತು. ವಿದ್ಯಾರ್ಥಿ ಶಿವಲಿಂಗ ಹಾಡಿದ್ದರು. ಸ್ವಾಗತ ಭಾಷಣವನ್ನು ಭೀಮಾಶಂಕರ್ ಪಾಣೇಗಾಂವ್ ಮಾಡಿದರು. ನಿರೂಪಣೆಯನ್ನು ಕಾಶಿಬಾಯಿ ಗುತ್ತೇದಾರ, ಪ್ರದೀಪ್ ಜಮಾದಾರ್ ವಹಿಸಿದ್ದರು.ನಿಂಗಣ್ಣ ಜಂಬಗಿ ಪ್ರಾಸ್ತಾವಿಕ ನುಡಿ ಮಾತಾನಾಡಿದರು. ವಂದನಾರ್ಪಣೆಯನ್ನು ರಾಜಶೇಖರ್ ಮಾತೋಳಿ ವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಫೋಟೋ ಜರ್ನಲಿಸ್ಟ್ ಅಶೋಕ್ ಪಾಟೀಲ್, ಬಸವರಾಜ್, ರಾಘು ಕುಲಕರ್ಣಿ ಹಾಜರಿದ್ದರು. ಈ ಸಂದರ್ಭದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಸಿದ್ದಮ್ಮ ಜಮಾದಾರ್, ದಸ್ತಗಿರ್ ನದಾಫ, ಜಯಲಕ್ಷ್ಮಿ, ದೇವೇಂದ್ರ ಚಾವಡಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಹಾಗೂ ತೃತೀಯ ಸೆಮಿಸ್ಟರ್ ನ ರೋಹಿತ್, ಸ್ನೇಹಾ ತೇಲಕರ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here