ಶಹಾಬಾದ:ನಗರದ ಬಿಜೆಪಿ ಕಾರ್ಯಾಲಯದಲ್ಲಿ ರವಿವಾರ ಶಾಸಕ ಬಸವರಾಜ ಮತ್ತಿಮಡು ಅವರ ಸಮ್ಮುಖದಲ್ಲಿ ವಿವಿಧ ಪಕ್ಷದ ಮುಖಂಡರು ತಮ್ಮ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ಜೆಡಿಎಸ್ ಪಕ್ಷದಿಂದ ಜಗದೇವ ಸುಬೇದಾರ ಮತ್ತು ಸುಭಾಷ ಕುಸಾಳೆ, ಕಾಂಗ್ರೆಸ್ ಪಕ್ಷದಿಂದ ಬಸವರಾಜ ರ್ಯಾಪನೂರ,ಮುಕಿಂದಪ್ಪ ಖೇತ್ರೆ, ಕಾಶಿನಾಥ,ಬಸವರಾಜ, ಹಣಮಂತ ಹೆಡಗಿ ಮದ್ರಿ ಹಾಗೂ ಶೇಖ ಮೆಹಬೂಬ ಅವರನ್ನು ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಸವರಾಜ ಮತ್ತಿಮಡು, ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪನವರ ಕಾರ್ಯ ವೈಖರಿಯನ್ನು ಕಂಡು ವಿವಿಧ ಪಕ್ಷದ ಮುಖಂಡರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ನಗರದಲ್ಲಿ ಜನಪರವಾದ ಆಡಳಿತ ನೀಡು ನಿಟ್ಟನಲ್ಲಿ ಮತ್ತು ಜನರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಅಗತ್ಯವಿದೆ.ಅಲ್ಲದೇ ಪಕ್ಷವನ್ನಿ ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸುಭಾಷ ಜಾಪೂರ, ಅನೀಲ ಬೋರಗಾಂವಕರ್,ನಾಗರಾಜ ಮೇಲಗಿರಿ,ಅರುಣ ಪಟ್ಟಣಕರ್, ಸಂಜಯ ಸೂಡಿ,ಅಣ್ಣಪ್ಪ ದಸ್ತಾಪೂರ, ಸದಾನಂದ ಕುಂಬಾರ,ಬಸವರಾಜ ಮದ್ರಕಿ,ರವಿ ರಾಠೋಡ, ಅನೀಲ, ಕನಕಪ್ಪ ದಂಡಗುಲಕರ್, ಭಾಗಿರಥಿ ಗುನ್ನಾಪೂರ, ಜ್ಯೋತಿ ಶಮರ್ಾ, ಜಯಶ್ರೀ ಸೂಡಿ,ಶಶಿಕಲಾ ಸಜ್ಜನ್ ಇತರರು ಇದ್ದರು.