ಮಾದಕ ವ್ಯಸನ ಮುಕ್ತ ಕಲಬುರಗಿ ನಿರ್ಮಿಣಕ್ಕೆ ಯುವಜನರಿಗೆ ಶಾಸಕ ಪ್ರಿಯಾಂಕ್ ಖರ್ಗೆ ಕರೆ

0
78

ಕಲಬುರಗಿ: ಕಳೆದ 20-25 ದಿನಗಳಿಂದ ಕಲಬುರಗಿ ಜಿಲ್ಲೆಯ ವಿವಿಧೆಡೆ ಪೊಲೀಸರು ದಾಳಿ ನಡೆಸಿ, ಅಕ್ರಮ ಗಾಂಜಾ ಅಡ್ಡೆಗಳನ್ನು ಬಯಲಿಗೆಳೆದು ಆರೋಪಿಗಳನ್ನು ಬಂಧಿಸುತ್ತಿರುವುದು ಸಂತಸದ ವಿಚಾರ. ಆದರೆ, ಇಷ್ಟೊಂದು ಅಪಾರ ಪ್ರಮಾಣದ ಗಾಂಜಾ ಪತ್ತೆಯಾಗುತ್ತಿರುವುದನ್ನು ನೋಡಿದರೆ, ನಮ್ಮ ಜಿಲ್ಲೆಯು ಮಾದಕ ವಸ್ತುಗಳ ಕೇಂದ್ರ ತಾಣವಾಗಿದೆಯಾ ಎಂಬ ಅನುಮಾನ ಮೂಡುತ್ತಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಕುರಿತು ಬರೆದುಕೊಂಡಿರು ಶಾಸಕ ಮಾದಕ ವ್ಯಸನ ಎಂಬುದು ಇಡೀ ಜಗತ್ತನ್ನೇ ಆವರಿಸಿರುವ ಒಂದು ಪಿಡುಗು. ಈ ಪಿಡುಗು ಇತ್ತೀಚೆಗೆ ನಮ್ಮ ಜಿಲ್ಲೆಯಲ್ಲೂ ವ್ಯಾಪಕವಾಗಿ ಹಬ್ಬಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಮಾದಕ ದ್ರವ್ಯ ಚಟಕ್ಕೆ ಬಲಿಯಾಗುವವರಲ್ಲಿ ಕಾಲೇಜು ವಿದ್ಯಾರ್ಥಿಗಳೇ ಅಧಿಕ. ಈ ವ್ಯಸನಗಳಿಗೆ ದಾಸರಾಗುವುದೆಂದರೆ ಹಣ ಕೊಟ್ಟು ರೋಗಗಳನ್ನು ಕೊಂಡುಕೊಂಡಂತೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಈ ಬಗ್ಗೆ ಜಿಲ್ಲೆಯ ವಿದ್ಯಾರ್ಥಿಗಳು ಜಾಗೂರಕರಾಗಿಬೇಕೆಂದು ಮನವಿ ಮಾಡಿದ ಅವರು, ಮೋಜಿನ ಹೆಸರಲ್ಲಿ ಕ್ಷಣಿಕ ತೃಪ್ತಿಗಾಗಿ ದುಶ್ಚಟಗಳಿಗೆ ಬಲಿಯಾಗಿ, ತಮ್ಮ ಅಮೂಲ್ಯ ಜೀವನವನ್ನು ಹಾಳುಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ ಅವರು ದೇಶದ ಭವಿಷ್ಯದ ಬೆಳಕಾಗಿರುವ ಯುವಕರು, ಇಲ್ಲಸಲ್ಲದ ಚಟಗಳಿಗೆ ಬಲಿಯಾಗುವುದಕ್ಕಿಂತ ಮುಂಚೆ ತಮ್ಮ ಕನಸುಗಳು, ತಂದೆ – ತಾಯಿ ತಮ್ಮ ಮೇಲಿಟ್ಟಿರುವ ಭರವಸೆ, ತಮ್ಮ ಗುರಿಯತ್ತ ಒಮ್ಮೆ ತಿರುಗಿ ನೋಡಬೇಕು ಎಂದು ಕೀವಿ ಮಾತು ಹೇಳಿದ್ದಾರೆ.

ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಡ್ರಗ್ಸ್‌ನಂತಹ ಪಿಡುಗುಗಳ ಸಮಾಧಿಯ ಮೇಲೆ ಸದೃಢ ಭಾರತವನ್ನು ಕಟ್ಟಬೇಕಾದ ಜವಾಬ್ದಾರಿ ನಮ್ಮ ಯುವಕರ ಹೆಗಲ ಮೇಲಿದ್ದು, ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡುಚ ಪಣ ತೊಡಬೇಕೆಂದು ಜಿಲ್ಲೆಯ ಯುವ ಜನತೆಗೆ ಕರೆ ನೀಡಿದ್ದಾರೆ.

ಕಳೆದ 20-25 ದಿನಗಳಿಂದ ಕಲಬುರಗಿ ಜಿಲ್ಲೆಯ ವಿವಿಧೆಡೆ ಪೊಲೀಸರು ದಾಳಿ ನಡೆಸಿ, ಅಕ್ರಮ ಗಾಂಜಾ ಅಡ್ಡೆಗಳನ್ನು ಬಯಲಿಗೆಳೆದು ಆರೋಪಿಗಳನ್ನು…

Posted by Priyank Kharge on Tuesday, September 29, 2020

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here