ರಾಷ್ಟೀಯ ಪೋಷಣಾ ಅಭಿಯಾನ ಗರ್ಭೀಣಿಯರಿಗೆ ವನ ಭೋಜನ ಕೂಟ ಆಯೋಜನೆ

0
44

ರಾಯಚೂರು: ರಾಷ್ಟೀಯ ಪೋಷಣಾ ಅಭಿಯಾನ ಮಾಸಾಚರಣೆ ಕಾರ್ಯಕ್ರಮ ಅಂಗವಾಗಿ ಹರಿಜನವಾಡ ವಲಯದ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ ಬರುವರು ಗರ್ಭಿಣಿ ಮಹಿಳೆಯರಿಗೆ ವನ ಭೋಜನ ಕೂಟ ಹಮ್ಮಿಕೊಳ್ಳಲಾಗಿತ್ತು.

೧೦ ಜನ ಗರ್ಭೀಣಿ ಮಹಿಳೆಯರನ್ನು ವಾಸವಿನಗರದ ಬಳಿಯಿರುವ ಉದ್ಯಾನವನಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಅವರಿಗೆ ಕೋವಿಡ್-೧೯ ಸುರಕ್ಷಿತಾ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ಪೌಷ್ಟಿಕ ಆಹಾರ ಬಗೆ ಹಸಿರು ಸೊಪ್ಪು ತರಕಾರಿ, ಮಹತ್ವಾಕಾಂಕ್ಷಿ ಕೇಂದ್ರ ಸರಕಾರದ ಪ್ರಥಮ ಗರ್ಭಿಣಿ ಮಹಿಳೆಯರಿಗೆಂದು ಮಾತೃವಂದನಾ ಯೋಜನೆ ಮತ್ತು ಅದರ ಉಪಯೋಗದ ಬಗ್ಗೆ ತಿಳಿಸಿ ಅವರಿಗೆ ಜೋಕಾಲೆ ವ್ಯವಸ್ಥೆ ಮಾಡಲಾಯಿತು.

Contact Your\'s Advertisement; 9902492681

ಉದ್ಯಾನವನದ ಹಸಿರು ಸವಿಯನ್ನು ಸವಿಸಿ ಗರ್ಭಿಣಿ ಮಹಿಳೆಯರಿಗೆ ಜಾನಪದ ಗೀತೆಗಳನ್ನು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿದರು. ಈ ವೇಳೆ ಗರ್ಭಿಣಿ ಮಹಿಳೆಯರು ಮನ ಪೂರ್ವಕವಾಗಿ ನೃತ್ಯ ಮಾಡಿ ಆನಂದ ಪಟ್ಟರು ಕೂನೆಗೆ ಎಲ್ಲಾ ಮಹಿಳೆಯರಿಗೆ ಪೌಷ್ಟಿಕ ಆಹಾರ ಸವಿದರು.

ಈ ಸಂದರ್ಭದಲ್ಲಿ ಹರಿಜನವಾಡ ವಲಯ ಮೇಲ್ವಿಚಾರಕಿ ಮೂಕಾಂಬಿಕಾ, ಅಂಗನವಾಡಿ ಕಾರ್ಯಕರ್ತೆರಾದ ಹೆಚ್.ಪದ್ಮಾ, ಚಂದ್ರಕಲಾ, ವಿಧ್ಯಾಶ್ರೀ, ಬಸವರಾಜೇಶ್ವರಿ, ಅಂಜಿನಮ್ಮ ಭಾಗವಹಿಸಿದ್ದರು.

  • ಮುತ್ತಣ್ಣ ರಾಯಚೂರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here