ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಭೀಮರಾಯ ಕಡಿಮನಿ

0
247

ಸುರಪುರ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ ಬಣ) ಸುರಪುರ ತಾಲೂಕು ಸಂಚಾಲಕರನ್ನಾಗಿ ತಾಲೂಕಿನ ಲಕ್ಷ್ಮೀಪುರ ಗ್ರಾಮದ ಭೀಮರಾಯ ಕಡಿಮನಿಯವರನ್ನು ನೇಮಕಗೊಳಿಸಲಾಗಿದೆ.

ಈ ಕುರಿತು ಸಂಘಟನೆಯ ರಾಜ್ಯಾಧ್ಯಕ್ಷ ಎನ್.ಮೂರ್ತಿಯವರ ಮಾರ್ಗದರ್ಶನದಲ್ಲಿ ಜಿಲ್ಲಾದ್ಯಕ್ಷ ಹಣಮಂತ ಕಟ್ಟಿಮನಿ ಆದೇಶ ಹೊರಡಿಸಿದ್ದು,ಭೀಮರಾಯ ಕಡಿಮನಿಯವರನ್ನು ತಾಲೂಕು ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದೆ.

Contact Your\'s Advertisement; 9902492681

ಸಂಘಟನೆಯ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ತಾಲೂಕಿನಲ್ಲಿಯ ದಲಿತರ ಮೇಲಿನ ದೌರ್ಜನ್ಯ ಮತ್ತು ದಲಿತರ ಏಳಿಗೆಯ ಜೊತೆಗೆ ತಾಲೂಕಿನ ಅಭಿವೃಧ್ಧಿಗೆ ಹೋರಾಟ ರೂಪಿಸಿಕೊಂಡು ಸಂಘಟನೆಯನ್ನು ಬಲಪಡಿಸುವಂತೆ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here