ಬಾಬರಿ ಧ್ವಂಸ ಪ್ರಕರಣ: ಆರೋಪಿಗಳ ಖುಲಾಸೆ ನ್ಯಾಯದ ಅಪಹಾಸ್ಯ: ಸಿಪಿಐ(ಎಂ)

0
52

ಕಲಬುರಗಿ: ಬಾಬ್ರಿ ಮಸೀದಿ ದ್ವಂಸ ಪ್ರಕರಣ ಪೂರ್ವನಿಯೋಜಿತವಲ್ಲ ಆಕಸ್ಮಿಕ ಅಂತ ಹೇಳಿ ಲಕ್ನೌ CBI ವಿಶೇಷ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.ಎಲ್ಲಾ 32 ಆರೋಪಿಗಳಿಗೂ ಕ್ಲೀನ ಚಿಟ್ ನೀಡಿ ಕೇಸನ್ನು ಖುಲಾಸೆಗೊಳಿಸಿದ ತೀರ್ಪನ್ನು BJP ಸ್ವಾಗತಿಸಿ ಸಂಭ್ರಮಾಚರಣೆ ನಡೆಸಿದೆ. ಈ ತೀರ್ಪು ನ್ಯಾಯದ ಅಪಹಾಸ್ಯ ಎಂದು CPI(M) ರಾಜ್ಯ ಸದಸ್ಯ ಮಾರುತಿ ಮಾನ್ಪಡೆ ಆರೋಪಿಸಿದ್ದಾರೆ.

ಈ ಕುರಿತು ರಾಜ್ಯ ಸಮಿತಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, 1992 ರಲ್ಲಿ ಮಸೀದಿ ಕೆಡವಲು ಸಂಚು ರೂಪಿಸಿದ್ದು ಗೊತ್ತಾಗಿ ಅಂದಿನ ಅಧಿಕಾರಿಗಳು ಮುನ್ನೆಚ್ಚರಿಕೆ ಭಾಗವಾಗಿ ಸಂವಿಧಾನದ 356 ನೇ ವಿಧಿಯನ್ನು ಬಳಕೆ ಮಾಡಿ ಬಾಬ್ರಿ ಮಸೀದಿ ಕಟ್ಟಡ ಕೇಂದ್ರ ಸರಕಾರ ತನ್ನ ಸುಪರ್ದಿಗೆ ತಗೆದುಕೊಳ್ಳಬೇಕೆಂದು 2 ದಿನಗಳ ಮುಂಚೆಯೇ ಗೃಹ ಸಚಿವಾಲಯವು ಅಂದಿನ ಪ್ರಧಾನ ಮಂತ್ರಿಗಳಾದ ಪಿ.ವಿ.ನರಸಿಂಹರಾವ ಅವರಿಗೆ ಕೇಳಿತ್ತು. ಆದರೆ ಪ್ರಧಾನ ಮಂತ್ರಗಳು ತಮ್ಮದೇ ಕಾರಣ ನೀಡಿ ಬಾಬರೀ ಮಸೀದಿ ಕಟ್ಟಡ ಕೇಂದ್ರ ಸರಕಾರದ ವಶಕ್ಕೆ ತೆಗೆದುಕೊಳ್ಳಲು ನಿರಾಕರಿಸಿತು.

Contact Your\'s Advertisement; 9902492681

ಅಂದಿನ ಕಾಂಗ್ರೆಸ್ ಆಡಳಿತ ಸರಕಾರ ಬಾಬರೀ ಮಸೀದಿಯ ಕಟ್ಟಡ ತನ್ನ ಸುಪರ್ಧಿಗೆ ತೆಗೆದುಕೊಳ್ಳುವ ಏಕೈಕ ಮಾರ್ಗ ಕೈಚೆಲ್ಲಿತು. CBI ಚಾರ್ಜ್ ಶೀಟ ಸಲ್ಲಿಸಲು ಕೇಂದ್ರ ಸರಕಾರದ ಒತ್ತಡಕ್ಕೆ ಮಣಿದು ಆರೋಪಿಗಳು ಖುಲಾಸೆಯಾಗುವಂತೆ ರಾಜಕೀಯ ಒತ್ತಡಕ್ಕೆ ಒಳಗಾಗಿ ಬಲಾಡ್ಯ ಆರೋಪಿಗಳಿಗೆ ಅನುಕೂಲವಾಗುವಂತೆ ಚಾರ್ಜಶೀಟ ಸಲ್ಲಿಸಲಾಗಿದೆ ಎಂದು ಜಿಲ್ಲಾ ಸಮಿತಿಯ ಸದಸ್ಯ ಶರಣಬಸಪ್ಪ ಮಮಶೇಟಿ ತಿಳಿಸಿದ್ದಾರೆ

ಈ ತೀರ್ಪು ನ್ಯಾಯಾಂಗದ ಮೇಲಿರುವ ಜನತೆಯ ವಿಶ್ವಾಸಕ್ಕೆ ಧಕ್ಕೆ ತಂದಿದ್ದು, BJP ಅಧಿಕಾರಕ್ಕೆ ಬಂದಾಗಿನಿಂದ ನ್ಯಾಯಾಂಗದ ಪರಂಪರೆ ಉಲ್ಲಂಘಿಸಿ ಸಂವಿಧಾನದ ಕಲಂಗಳು ಹಾಗೂ ಹಲವಾರು ಕಾನೂನುಗಳನ್ನು ಗಾಳಿಗೆ ತೂರಿ ಕೇಂದ್ರ ಸರಕಾರ ಹೇಳಿದ್ದನ್ನು ಮಾತ್ರ ಮಾಡುತ್ತಿದೆ ಎಂದು ಸಮಿತಿ ಆರೋಪಿಸಿದೆ.

ದೇಶದ ಸಂವಿಧಾನದ 3ನೇ ಅಂಗ ಎಂಬುದನ್ನು ಮರೆಮಾಚುವಂತ ಸ್ಥಿತಿ ಬಂದೊದಗಿದೆ ಎಂದು ತಿಳಿಸಿದ ಅವರು ತೀರ್ಪನ್ನು ಭಾರತೀಯ ಮುಸ್ಲಿಂ ಕಾನೂನು ಮಂಡಳಿ ಹೈಕೋರ್ಟ ಮೆಟ್ಟಿಲೇರಲು ಚಿಂತನೆ ನಡೆಸಿದೆ ಎಂದು ತನ್ನ ಹೇಳಿಯಲ್ಲಿ ತಿಳಿಸಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here