ದಾಕ್ಷಾಯಣಿ ಅಪ್ಪ ಅವರಿಗೆ ಡಾಕ್ಟರೇಟ್: ವೀರಶೈವ ಮಹಾಸಭಾದಿಂದ ಸನ್ಮಾನ

0
75

ಕಲಬುರಗಿ: ಕಲ್ಯಾಣ ಕರ್ನಾಟಕದ ಐತಿಹಾಸಿಕ ಆರಾಧ್ಯ ದೇವರಾದ ಶ್ರೀ ಶರಣಬಸವೇಶ್ವರ ಸಂಸ್ಥಾನದ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥಾನದ ಪ್ರಸ್ತುತ ಅಧ್ಯಕ್ಷೆ,ಕಲೆ, ಸಾಹಿತ್ಯ, ಸಂಸ್ಕೃತಿ, ಆಶ್ರಯದಾತರಾಗಿರುವ ದಾಕ್ಷಾಯಿಣಿ ಅಮ್ಮಾವರಿಗೆ ದಾವಣಗೆರೆ ವಿವಿ ಗೌರವ ಡಾಕ್ಟರೇಟ್ ಘೋಷಿಸುರುವ ಹಿನ್ನೆಲೆಯಲ್ಲಿ ಇಂದು ಅಖಿಲ ಭಾರತ ವೀರಶೈವ ಮಹಾಸಭಾದಿಂದ ಸನ್ಮಾನಿಸಲಾಯಿತು.

ಶರಣ ಪರಂಪರೆಯಂತೆ ಸಕಲ ಜೀವಿಗಳಿಗೆ ಲೇಸನ್ನೇ ಬಯಸುತ್ತಿರುವ, ಶೈಕ್ಷಣಿಕ ಸಾಮಾಜಿಕ-ಧಾರ್ಮಿಕ ಸೇವೆಯನ್ನು ಪರಿಗಣಿಸಿ, ಪೂಜ್ಯ ಮಾತೋಶ್ರೀಯವರಾದ ದಾಕ್ಷಾಯಣಿ ಶರಣಬಸಪ್ಪ ಅಪ್ಪರವರಿಗೆ, ಡಾಕ್ಟರೇಟ್ ಪದವಿಗೆ ಬಾಜನರಾಗಿರುವುದು ಅಷ್ಟೇ ಅಲ್ಲ ಕರ್ನಾಟಕ ಅಲ್ಲದೆ ದೇಶಾದ್ಯಂತ ಇರುವ ಶರಣ ಭಕ್ತರಿಗೆ ಸಂತೋಷವಾಗಿದೆ ಎಂದರು.

Contact Your\'s Advertisement; 9902492681

ಅಮ್ಮ ಅವರಿಗೆ ಡಾಕ್ಟರೇಟ್ ನೀಡುವ ಮೂಲಕ ದಾವಣಗೆರೆ ವಿಶ್ವವಿದ್ಯಾಲಯ ಗೌರವ ಹೆಚ್ಚಿಸಿಕೊಂಡಿದೆ, ಇಂದು ಪೂಜ್ಯ ಶ್ರೀ ಡಾ. ಶರಣಬಸಪ್ಪ ಅಪ್ಪ ಅವರ ಸಮ್ಮುಖದಲ್ಲಿ ಮಾತೋಶ್ರೀ ಡಾಕ್ಟರ್ ದ್ರಾಕ್ಷಾಯಿಣಿ ಅಮ್ಮನವರನ್ನು ಗೌರವ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಡಾ. ಶರಣ್ ಕುಮಾರ್ ಮೋದಿ, ಪ್ರಧಾನ ಕಾರ್ಯದರ್ಶಿಗಳಾದ ಡಾ. ಶರಣ ಬಿ ಪಾಟೀಲ್, ಉಪಾಧ್ಯಕ್ಷರಾದ ಸಿದ್ದು ಪಾಟೀಲ್, ಗೌರಿ ಚಿತಕೋಟಿ, ವೀರಣ್ಣ ಗೋಳೆದ, ರಾಜುಗೌಡ ನಾಗನಹಳ್ಳಿ, ಶೀಲಾ ಮುತಿನ ಮಹಿಳಾ ಘಟಕದ ಅಧ್ಯಕ್ಷರಾದ ಡಾ! ಸುಧಾ ಹಾಲಕಾಯಿ, ಯುವ ಘಟಕದ ಜಿಲ್ಲಾ ಗೌರವಾಧ್ಯಕ್ಷರಾದ ಎಂ.ಎಸ್. ಪಾಟೀಲ್ ನರಿಬೋಳ, ಪದಾಧಿಕಾರಿಗಳಾದ ಶೀಲಾ ಮುತ್ತಿನ್ ,ಚನ್ನಪ್ಪ ದಿಗ್ಗಾವಿ ,ಡಾ. ರವಿ ಮಲಶೆಟ್ಟಿ, ಭೀಮಶಂಕರ್ ಮೆಟೇಕರ್, ಸಂತೋಷ ಗಂಗಸಿರಿ, ಬಸವರಾಜ ಪಾಟೀಲ್ ವರ್ಚನಳ್ಳಿ, ಶರಣು ಟೆಂಗಳಿ, ಅಶೋಕ್ ಮಾನಕರ್, ಜೆಕೆ ಪಾಟೀಲ್ ಹರಸೂರ, ಶರಣಗೌಡ ಪಾಟೀಲ್, ಮಹೇಶ ರೆಡ್ಡಿ ಇನ್ನಿತರರಿದ್ದರು .

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here