ಕೆನರಾ ಶಾಖೆ ವ್ಯವಸ್ಥಾಪಕರಿಗೆ ಗ್ರಾಹಕರಿಂದ ಸನ್ಮಾನ

0
863

ಶಹಾಬಾದ:ನಗರದ ಕೆನರಾ ಬ್ಯಾಂಕ್ ವ್ಯವಸ್ಥಾಪಕರಾಗಿ ಆಗಮಿಸಿದ ಹಣಮಂತರಾವ ದೇಗಾಂವ ಅವರು ಒಳ್ಳೆಯ ಕೆಲಸ ಮಾಡುವ ಮೂಲಕ ತಾಲೂಕಿನಲ್ಲಿ ಜನಮನ್ನಣೆ ಪಡೆದವರು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಪ್ರಮೋದಕುಮಾರ ಹೇಳಿದರು.

ಅವರು ನಗರದ ಕೆನರಾ ಬ್ಯಾಂಕನಲ್ಲಿ ಶಾಖೆಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಹಣಮಂತರಾವ ದೇಗಾಂವ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಆಯೋಜಿಸಲಾದ ಬೀಳ್ಕೊಡುಗೆ ಸಮಾರಂಭದ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ಯಾವತ್ತಿಗೂ ಬೇಸರವಿಲ್ಲದೇ ಗ್ರಾಹಕರಿಗೆ ಸ್ಪಂದಿಸುತ್ತ ಕೆಲಸ ಮಾಡಿದವರು. ಅವರು ವರ್ಗಾವಣೆಗೊಂಡಿರುವುದು ನಮಗೆಲ್ಲ ಬೇಸರ ತಂದಿದೆ ಎಂದರು.

ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಸಂತೋಷ ಸಲಗಾರ ಮಾತನಾಡಿ, ಹಣಮಂತರಾವ ಅವರು ತಮ್ಮ ಉತ್ತಮ ಕೆಲಸದ ಮೂಲಕ ಗುರುತಿಸಿಕೊಂಡವರು.ವರ್ಗಾವಣೆ ಎಂಬುದು ಅನಿವಾರ್ಯ.ಇಲಾಖೆಯ ಆದೇಶ ಪಾಲಿಸುವುದು ಅವರ ಕರ್ತವ್ಯ.ಅವರು ಎಲ್ಲೇ ಹೋದರೂ ತಾಲೂಕಿನ ಜನರು ಅವರನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿಕೊಂಡು ಮಾತನಾಡಿದ ಕೆನರಾ ಬ್ಯಾಂಕ ಶಾಖೆಯ ವ್ಯವಸ್ಥಾಪಕ ಹಣಮಂತರಾವ ದೇಗಾಂವ, ಸೇವೆಯೆಂದರೆ ಬರಿ ವೇತನಕ್ಕಾಗಿ ಮಾಡುವುದಲ್ಲ.ಅಲ್ಲದೇ ನಮ್ಮ ಜೀವನೋಪಾಯಕ್ಕಾಗಿ ಕೆಲಮಾಡುವುದಲ್ಲ.ಅದರ ಬದಲಾಗಿ ಸಂಸ್ಥೆಯ ಅಭಿವೃದ್ಧಿ ಗ್ರಾಹಕರ ಅನುಕೂಲಕ್ಕೆ ಅನುಗುಣವಾಗಿ ಸೇವೆ ಮಾಡಿದಾಗ ನಾವು ವೇತನ ಪಡೆದದ್ದು ಸಾರ್ಥಕವಾಗುತ್ತದೆ.ಈ ಶಾಖೆಗೆ ಬಂದ ಮೇಲೆ ಒಳ್ಳೆಯ ಕಾರ್ಯ ಮಾಡಲು ತಾಲೂಕಿನ ಮುಖಂಡರು, ಗ್ರಾಹಕರು, ಸಿಬ್ಬಂದಿ ವರ್ಗವದರು ಒಳ್ಳೆಯ ಸಹಕಾರ ನೀಡಿದ್ದಾರೆ.ಅದೇ ರೀತಿಯಾಗಿ ಮುಂದೆ ಬರುವ ಅಧಿಕಾರಿಗಳಿಗೂ ಕೂಡ ಇದೇ ಸಹಾಯ ಸಹಕಾರ ನೀಡಿ. ಕೆಲಸ ಮಾಡುವ ಸಂಸ್ಥೆಯ ಪ್ರಗತಿಗೆ ಕಾರಣಿಭೂತರಾಗಬೇಕೆಂದು ಹೇಳಿದರು.

ಭೀಮನಗೌಡ , ಸಂಗಾನಂದ ರಂಗಾರೇ, ಮಲ್ಲಿನಾಥ ಪಾಟೀಲ, ವಿವಿಧ ಶಾಲೆಯ ಶಿಕ್ಷಕರು, ಸರಕಾರಿ ನೌಕರರು, ಉದ್ದಿಮೆದಾರರು ಹಾಗೂ ಗ್ರಾಹಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here