ಗಾಂಧಿ ಸತ್ಯ ಮತ್ತು ಅಹಿಂಸೆ.

0
121

ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನವಾದ ಅಕ್ಟೋಬರ್ 2 ರಂದು ನಾವು ಗಾಂಧಿ ಜಯಂತಿ ಎಂದು ಆಚರಣೆ ಮಾಡಲಾಗುತ್ತದೆ.ಗಾಂಧೀಜಿಯವರು ಸತ್ಯ ಮತ್ತು ಅಹಿಂಸೆಯ ಮೂಲಕ ಬದುಕಿನ ಚಳವಳಿಯನ್ನು ಆರಂಭಿಸಿದ ಯುಗ ಪುರುಷ,ಅಸಹಕಾರ ಚಳವಳಿ,ಉಪ್ಪಿನ ಸತ್ಯಾಗ್ರಹ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ,ಹೀಗೆ ಹಲವಾರು ಹೋರಾಟದ ರೂಪುರೇಷೆಗಳೊಂದಿಗೆ ಹೋರಾಡಿ ಜಯವನ್ನು ತಂದುಕೊಟ್ಟ ಮಹಾತ್ಮ ಗಾಂಧಿಜಿಯವರು ಅವರೊಂದು ವ್ಯಕ್ತಿಯಲ್ಲ ದಿವ್ಯ ವ್ಯಕ್ತಿತ್ವದ ಮಹಾ ನ್ ಪ್ರತಿಭೆ ಕೇವಲ ನಮ್ಮ ಜವನಾಂಗಕ್ಕೆ ಮಾತ್ರ ಸೀಮಿತವಲ್ಲ ಇಡೀ ಮಾನವಕುಲಕ್ಕೆ ಮಾರ್ಗದರ್ಶಿಯಾಗಿದ್ದರು.

ಮಾನವ ಸಮಾಜವೇ ಅತ್ಯಂತ ದಾರುಣವಾಗಿ ಯಾತನೆ ಅನುಭವಿಸಬೇಕಾಗಿ ಬಂದಂತಹ ಸಮಯದಲ್ಲಿ ಶಾಂತಿ ಮತ್ತು ಸಮಾನತೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಹೋರಾಟ ಮಾಡಿ ನ್ಯಾಯ ದೊರಕಿಸಿಕೊಟ್ಟ ಮಹಾನ್ ವ್ಯಕ್ತಿ.ಮಾನವ ಜನಾಂಗಕ್ಕಿರುವ ಉದ್ಧಾರದ ದಾರಿಯೆಂದರೆ ಅಹಿಂಸೆ ಮತ್ತು ಶಾಂತಿಯುತೆ.ಇಂತಹ ನಡವಳಿಕೆಯ ಮೂಲಕ ಮಾನವೀಯ ಅಂತಃಕರಣವನ್ನು ಜಾಗೃತಿಗೊಳಿಸಿ ನಾಗರಿಕತೆಗೆ ಸವಾಲಾಗಿರುವ ಕೆಡುಕುಗಳನ್ನು ಹೋಗಲಾಡಿಸಿ ಜಗತ್ತಿನಲ್ಲಿ ಶಾಂತಿ ಸೌಹಾರ್ದತೆಯನ್ನು ನೆಲೆಸುವಂತೆ ಮಾಡುವುದು ಮುಖ್ಯ ಉದ್ದೇಶ ಇವರದಾಗಿತ್ತು.

Contact Your\'s Advertisement; 9902492681

ಹಿಂದೂ ಸಮಾಜದ ಸುಧಾರಣೆಗಾಗಿ ಗಾಂಧೀಜಿಯವರು ನೀಡಿರುವ ಕೊಡುಗೆ ಅತ್ಯಮೂಲ್ಯವಾಗಿದೆ.ಕರ್ನಾಟಕದ ಜತೆಗೆ ಉತ್ತಮ ಬಾಂಧವ್ಯ ಹೊಂದಿದ್ದ ಅವರು ಹಲವಾರು ಬಾರಿ ಇಲ್ಲಿಗೆ ಬಂದು ಹೋಗಿದ್ದರು.ಅದು ಮೊದಲ ಬಾರಿಗೆ 1915 ರಲ್ಲಿ ಮೇ 8 ರಂದು ಗೋಪಾಲಕೃಷ್ಣ ಗೋಖಲೆ ಅವರ ಸೂಚನೆಯ ಮೇರೆಗೆ ಬೆಂಗಳೂರಿಗೆ ಪತ್ನಿಯ ಜೊತೆ ಗಾಂಧೀಜಿಯವರು ಭೇಟಿ ನೀಡಿದ್ದು ಯಾರೂ ಮರೆಯುವಂತಿಲ್ಲ.ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಸಮಾರಂಭದುದ್ದಕ್ಕೂ ಸತ್ಯ ಅಹಿಂಸೆ ಶಾಂತಿ ಮುಂತಾದ ಸನಾತನ ತತ್ವಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದ ಅವರು ಇತರರಿಗೂ ಅವುಗಳ ಮಹತ್ವ ತಿಳಿಸಿಕೊಟ್ಟುರು.

ಈ ಸಮಾಜಕ್ಕೆ ಶಾಪವಾಗಿ ಕಾಡುತ್ತಿದ್ದ ಅಸ್ಪೃಶ್ಯತೆ ನಿವಾರಣೆಗೆ ತಮ್ಮ ಜೀವ ಮಾನವರಿಗೂ ಹೋರಾಟ ಮಾಡಿ ಅಸ್ಪೃಶ್ಯತೆಯನ್ನು ಮೇಲಕ್ಕೆತ್ತಲು ಚಡಪಡಿಸಿದರು.ಪ್ರಸ್ತುತ ದಿನಮಾನಗಳಲ್ಲಿ ಅವರ ಕೊಡುಗೆಗಳು ಕ್ಷಣಕ್ಷಣಕ್ಕೂ ನಮಗೆ ನೆನಪಾಗುತ್ತವೆ. ಮಾರಕಾಸ್ತ್ರಗಳಿಂದ ಹಿಡಿದು ವಿಶ್ವವನ್ನೇ ಸುಟ್ಟು ಹಾಕಬಲ್ಲ ಹಾಗೂ ಭಯದ ನೆರಳಿನಲ್ಲಿ ಶಾಂತಿಯನ್ನು ಕಾಣಬಹುದೆಂಬ ಬಲಿಷ್ಠ ರಾಷ್ಟ್ರಗಳ ತರ್ಕದಿಂದಾಗಿ ವಿನಾಶ ನಾಗರಿಕತೆಯ ಬಾಗಿಲು ತಟ್ಟುತ್ತಿರುವ ಇಂದಿನ ದಿನಗಳಲ್ಲಿ ಹೃದಯವಂತಿಕೆ,ಮಾನವೀಯತೆ, ವಿಷಯ ಅಸ್ತ್ರಗಳಿಂದ ಶಸ್ತ್ರರಹಿತ ಜಗತ್ತಿನಲ್ಲಿ ಬಾಳುವ ರೀತಿಯನ್ನು ಮಹಾತ್ಮ ಗಾಂಧೀಜಿ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.

ಮಹಾತ್ಮ ಗಾಂಧೀಜಿ ಅವರನ್ನು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ಅವತಾರ ಪುರುಷನೆಂದು ಪೂಜಿಸಿ ಅವರ ತತ್ವಗಳನ್ನು ಸಾಧನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿ ಜೊತೆಗೆ ಅವರ ತತ್ತ್ವಾದರ್ಶಗಳನ್ನು ವಿಶ್ವದಾದ್ಯಂತ ನೆಲೆಸುವಂತೆ ಮಾಡುವ ತನ್ಮೂಲಕ ಶಾಂತಿ ಸೋದರತೆಯ ಮಂತ್ರದಿಂದ ಪ್ರಪಂಚದ ಕಲ್ಯಾಣವನ್ನು ಸಾಧಿಸುವ ಪ್ರಯತ್ನಿಸುವುದು ಆ ಮಹಾತ್ಮನಿಗೆ ನಾವು ತೋರಬಹುದಾದ ಗೌರವ,ಶ್ರದ್ಧೆ,ಸತ್ಯ, ನ್ಯಾಯ,ನೀತಿ,ನಿಷ್ಠೆಯಾಗಿದೆ.

ಗಾಂಧೀಜಿ ಜೀವನದ ಕುರಿತು ಅಧ್ಯಯನ ಮಾಡುವುದು ಕೇವಲ ಕಾಲಹರಣ ಹಾಗೂ ಮನೋರಂಜನೆಗಾಗಿ ಓದುವ ಕೇವಲ ಕಥೆಯಲ್ಲ ಅದು ಭಾರತದ ಇಂದಿನ ಸ್ಥಿತಿಗತಿಳಿಗೆ ಪೂರಕವಾಗಿ ಅರಿತುಕೊಳ್ಳುವ ಅಗತ್ಯತೆ ಇದೆ. ಅಲ್ಲದೆ ಈ ದೃಷ್ಟಿಯಿಂದ ಗಾಂಧೀಜಿ ಅವರ ಕುರಿತು ಅಧ್ಯಯನ ಶೀಲತೆ ನಮ್ಮ ಯುವ ಪೀಳಿಗೆಗೆ ಅತಿ ಮುಖ್ಯವಾಗಿದೆ.

ಗಾಂಧೀಜಿಯವರ ಜೀವನ ಶೈಲಿಯನ್ನು ಗಮನಿಸುತ್ತಾ ಹೋದರೆ ಸತ್ಯ- ಅಹಿಂಸೆಗಳನ್ನು ಕುರಿತು ಅಚಲ ನಂಬಿಕೆ, ಮಾನವೀಯ ಪ್ರೇಮ ಮೊದಲಾದ ಮೌಲ್ಯ ಗುಣಗಳು ಅವರ ವ್ಯಕ್ತಿತ್ವದ ಪ್ರಮುಖ ಅಂಶಗಳನ್ನು ನಾವಿಲ್ಲಿ ಕಾಣಬಹುದು.ಮಾನವ ಸಮಾಜದ ಮೌಲ್ಯಗಳಾದ ಪ್ರೇಮ ಶಾಂತಿ ಸರ್ವರ ಸುಖದ ಸಮಗ್ರ ಶಕ್ತಿಗಳನ್ನು ಸಾಧಿಸುವ ಗಾಂಧೀಜಿಯವರ ವಿಚಾರಧಾರೆಗಳನ್ನು ಈ ಯುಗಕ್ಕೆ ನೀಡಿದ ಅಮೂಲ್ಯವಾದ ಕೊಡುಗೆಗಳೆ ಎಂದು ಹೇಳಬಹುದು.ಅವರಿಗೆ ನಿಜಕ್ಕೂ ಪ್ರೇರಣೆಯಾದದ್ದು ಅವರು ಹುಟ್ಟಿ ಬೆಳೆದ ಸುಸಂಸ್ಕೃತಿಯ ಮನೆಯ ವಾತಾವರಣ ವಿಶೇಷವಾಗಿ ಅವರ ತಾಯಿಯ ಜೀವನ ವಿಧಾನ ಜೊತೆಗೆ ಅವರಲ್ಲಿದ್ದ ಧಾರ್ಮಿಕ ಮನೋಭಾವನೆಯ ಪ್ರೇರಣಗೆ ಮೂಲ ಎನ್ನಬಹುದು.

ಗಾಂಧೀಜಿಯವರ ಮುಖ್ಯ ಗುಣ ಪಾರದರ್ಶಕತೆ ಹೇಳಿದ್ದನ್ನೇ ಮಾಡುವುದು ಮಾಡಿದ್ದನ್ನೇ ಹೇಳುವುದು ಈ ಒಂದು ವಿಶೇಷ ಗುಣದಿಂದಲೇ ಗಾಂಧೀಜಿಯವರು ಭಾರತದ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದರು.ಒಂದು ಕುಟುಂಬವನ್ನು ಹತೋಟಿಯಲ್ಲಿ ಇಡುವ ಕಷ್ಟಕರವಾದ ಸಂದರ್ಭದಲ್ಲಿ ಒಂದೇ ಒಂದು ಕರೆಯಿಂದ ಇಡೀ ದೇಶವನ್ನೇ ಸತ್ಯಾಗ್ರಹಕ್ಕಾಗಿ ಅಣಿ ಮಾಡಿದ್ದರು ಎಂದರೆ ಅವರಲ್ಲಿ ಎಂಥ ಮಹಾನ್ ಶಕ್ತಿ ಇತ್ತು ಎಂಬುದು ಇಲ್ಲಿ ನಾವು ಅರಿತುಕೊಳ್ಳಬೇಕಾಗುತ್ತದೆ.

ಪ್ರಸ್ತುತ ದಿನಮಾನಗಳಲ್ಲಿ ಯುವಜನತೆ ದಾರಿ ತಪ್ಪುತ್ತಿದೆ ಆದ್ದರಿಂದ ತಾರುಣ್ಯದ ತುಡಿತದ ಮೇಲೆ ಒಳ್ಳೆಯ ಸಂಸ್ಕಾರದ ಹಿಡಿತವಿರಬೇಕು,ತಾರುಣ್ಯವೆಂಬ ಕಾಡಕುದುರೆಗೆ ಕೌಟುಂಬಿಕ ಪರಿಸರದ ಯೋಗ್ಯ ಸಂಸ್ಕಾರ ನೀಡದಿದ್ದರೆ ಬದುಕು ಅಧಃಪತನದತ್ತ ಸಾಗುವ ಅಪಾಯ ತಪ್ಪಿದ್ದಲ್ಲ,ಆದ್ದರಿಂದ ಯುವಜನತೆ ಮಹಾತ್ಮಾಗಾಂಧಿಜಿಯವರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಹಂತ ಹಂತವಾಗಿ ಉನ್ನತ ಶಿಖರದ ಮೆಟ್ಟಿಲೇರಲು ಸಾಧ್ಯ.ಗಾಂಧೀಜಿಯವರ ಅಹಿಂಸೆ ಮತ್ತು ಸತ್ಯದ ಬೋಧನೆಗಳು ಯುವಜನತೆಗೆ ತುಂಬುತ್ತಾ ಮುನ್ನಡೆದರು ಗ್ರಾಮೀಣ ಭಾಗದ ಯುವಜನತೆಯ ಬದುಕಿನ ಬಗ್ಗೆ ಅವರ ಏಳ್ಗೆಯ ಬಗ್ಗೆ ಅಪಾರವಾದ ಚಿಂತನೆ ನಡೆಸುತ್ತಾ ಬಂದವರು.

ಭಾರತದಂತಹ ದೊಡ್ಡ ರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಗ್ರಾಮೀಣ ಜನರ ಬದುಕು ಸುಧಾರಿಸಲು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಅತ್ಯವಶ್ಯಕ ಎಂಬುದು ಅವರ ವಿಚಾರವಾಗಿತ್ತು ಅದರೊಂದಿಗೆ ಯುವಜನತೆಯೂ ಅದರಲ್ಲಿ ತೊಡಗುವಂತೆ ಪ್ರೇರೇಪಿಸುತ್ತಿದ್ದರು.ಬ್ರಿಟಿಷರ ಆಗಮನದಿಂದ ಗ್ರಾಮೀಣರ ಬದುಕು ಯಾಂತ್ರೀಕರಣದಿಂದಾಗಿ ಅವೆಲ್ಲ ನಶಿಸಿ ಹೋಗುವ ಸಂದರ್ಭದಲ್ಲಿ ಸಣ್ಣ ಕೈಗಾರಿಕೆಗಳು ಹುಟ್ಟು ಹಾಕಿ ಹಳ್ಳಿಗಳ ಏಳಿಗೆಗಾಗಿ ಅವಿರತವಾಗಿ ಶ್ರಮಿಸಿದರು. ಹಿಂದೂ ಧರ್ಮದ ಹಾಗೂ ಹಿಂದೂ ಸಮಾಜದ ಉನ್ನತಿಗಾಗಿ ಗಾಂಧೀಜಿ ಅವರ ಕೊಡುಗೆ ಅವಿಸ್ಮರಣೀಯವಾದದ್ದು.

ಮಾನವ ಜನಾಂಗವನ್ನು ಹೊಸಕಿ ಹಾಕುವಷ್ಟು ಪ್ರಾಬಲ್ಯ ಪಡೆದಿರುವ ಇಂದಿನ ಕಾಲದಲ್ಲಿ ಮಹಾತ್ಮಾ ಗಾಂಧೀಜಿಯವರು ಪ್ರತಿಪಾದಿಸಿದ ಮಾನವೀಯತೆಯ ಮೌಲ್ಯಗಳು ಅಹಿಂಸಾ ಧರ್ಮ ಸಹೋದರತ್ವ ಮೊದಲಾದ ತತ್ತ್ವಗಳು ಇಂದಿನ ಕಾಲಘಟ್ಟದಲ್ಲಿ ಉತ್ತಮವಾದ ವಾತಾವರಣ ನಿರ್ಮಾಣ ಮಾಡಲು ಪರಸ್ಪರ ಹೃದಯವಂತಿಕೆಯಿಂದ ವರ್ತಿಸುವುದೇ ಮಂತ್ರ ಎಂದು ಜಗತ್ತಿಗೆ ಸಾರುತ್ತಿವೆ.

ಹಿಂಸೆಯನ್ನು ದ್ವೇಷದಿಂದ ಎದುರಿಸುವುದಲ್ಲ ಪ್ರೀತಿ ಹಾಗೂ ಸತ್ಯಾಗ್ರಹದಿಂದ ಎಂಬುದು ಗಾಂಧಿ ತತ್ವಗಳು ಎಂಬುದು ನಮ್ಮೆಲ್ಲರಿಗೆ ತೋರಿಸಿಕೊಟ್ಟಿವೆ.ಇಂಥ ವಿಚಾರಗಳನ್ನು ಜೀವನದಲ್ಲಿ ರೂಢಿಸಿಕೊಂಡು ಸಾಮಾಜಿಕ ರಾಜಕೀಯ ಹಾಗೂ ಆರ್ಥಿಕ ಸಮಸ್ಯೆಗಳ ನಿವಾರಣೆಗೆ ಅವುಗಳನ್ನು ಬಳಸಿಕೊಳ್ಳುವಂತೆ ಸನ್ಮಾರ್ಗವನ್ನು ಹಾಕಿಕೊಟ್ಟಿದ್ದಾರೆ.ಸತ್ಯ ನ್ಯಾಯ ನಿಷ್ಠುರವಾಗಿ ಜೀವನದುದ್ದಕ್ಕೂ ಅಳವಡಿಸಿಕೊಂಡು ಬದುಕಿದ ಸಾರ್ಥಕ ಬದುಕು ಇವರದಾಗಿದೆ ಸತ್ಯದ ಪ್ರತೀಕವಾದ ಈ ಜ್ಯೋತಿ ಎಂದೆಂದೂ ನಂದದ ಜ್ಯೋತಿ ಎಂದು ಮರೆಯಾದ ಮಹಾತ್ಮನಿಗೆ ಕೋಟಿ ನಮನಗಳು.

  • ಬಸವರಾಜ ಸಿನ್ನೂರ ಶಹಾಪುರ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here