ರಾಹುಲ್ ಗಾಂಧಿ ಮೇಲೆ ಪೊಲೀಸ್ ರ ದೌರ್ಜನ್ಯ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: ಮುಖಂಡರ ಬಂಧನ

0
79

ಕಲಬುರಗಿ: ಉತ್ತರ ಪ್ರದೇಶದಲ್ಲಿ ಗುರುವಾರ ಹತ್ರಾಸ್ ಗೆ ಬಿಡಿತ ಕುಟುಂಬಕ್ಕೆ ಭೇಟಿ ನೀಡಲು ತೆರಳುವ ವೇಳೆ  ಎಐಸಿಸಿ ಮಾಜಿ ಅಧ್ಯಕ್ಷರಾದ  ರಾಹುಲ್ ಗಾಂಧಿ ಮೇಲೆ  ಪೊಲೀಸ್ ರು ನಡೆಸಿದ ದೌರ್ಜನ್ಯ  ಖಂಡಿಸಿ ಜಿಲ್ಲಾ  ಕಾಂಗ್ರೆಸ್ ಸಮಿತಿವತಿಯಿಂದ ಪ್ರತಿಭಟನೆ ನಡೆಸಿದರು.

ನಗರದ  ಟೌನ್ ಹಾಲ್  ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಪ್ರತಿಕೃತಿ ದಹಿಸುವ ಮೂಲಕ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ಸಮಿತಿ ಅಧ್ಯಕ್ಷರಾದ  ಜಗದೇವ  ಗುತ್ತೇದಾರ ಕಾಳಗಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಪ್ರತಿಭಟನಾ ನಿರತ ಕಾಂಗ್ರೆಸ್ ಮುಖಂಡರು ಸೇರಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ್, ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಯುವ ಅಧ್ಯಕ್ಷರಾದ ಮಝರ್ ಆಲಂ ಖಾನ್,  ಸೇರಿದಂತೆ ಸಮಿತಿಯ ವಿವಿಧ ಬ್ಲಾಕ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here