ದೇವಾಪುರ ಗ್ರಾಮಕ್ಕೆ ಕುಡಿಯುವ ನೀರು ಒದಗಿಸಲು ಒತ್ತಾಯ

0
99

ಸುರಪುರ: ತಾಲ್ಲೂಕಿನ ದೇವಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ತುಂಬಾ ಉಂಟಾಗಿದ್ದು,ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ತಾಲ್ಲೂಕು ಪಂಚಾಯತಿ ಕಚೇರಿ ಮುಂದೆ ಗ್ರಾಮದ ಮಹಿಳೆಯರು ಮತ್ತು ನಾಗರಿಕರು ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿದ್ದ ವಿವಿಧ ಮುಖಂಡರು ಮಾತನಾಡಿ,ದೇವಾಪುರ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅನೇಕ ಬಾರಿ ಹೋರಾಟ ನಡೆಸಿ ಮನವಿ ಮಾಡಿಕೊಳ್ಳಲಾಗಿದೆ.ಆದರೆ ಇದುವರೆಗೂ ಸ್ಥಳಿಯ ಗ್ರಾಮ ಪಂಚಾಯತಿ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ.ಕಳೆದ ಕೆಲ ದಿನಗಳ ಹಿಂದೆ ಗ್ರಾಮ ಪಂಚಾಯತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದಾಗ ಅಧಿಕಾರಿಗಳು ನೀರಿನ ತೊಂದರೆ ನಿವಾರಿಸುವುದಾಗಿ ಭರವಸೆ ನೀಡಿದ್ದರು,ಆದರೆ ಇದುವರೆಗೂ ಸಮಸ್ಯೆ ಹಾಗೆಯಿದೆ.ಗ್ರಾಮಕ್ಕೆ ಕುಡಿಯುವ ನೀರು ಸರಬರಾಜಿಗಾಗಿ ಕೃಷ್ಣಾ ನದಿಯಿಂದ ಪೈಪ್‌ಲೈನ್ ಕಾಮಗಾರಿ ನಡೆಸಿ ಅರ್ಧಂಬರ್ಧ ಕಾಮಗಾರಿ ಮಾಡಿ ನಿಲ್ಲಿಸಿದ್ದಾರೆ.

Contact Your\'s Advertisement; 9902492681

ಅಲ್ಲದೆ ಗ್ರಾಮದಲ್ಲಿ ಕೊಳವೆಬಾವಿಗಳಿಂದ ನಲ್ಲಿಗಳಿಗೆ ನೀರು ಹರಿಸಲು ಅವಕಾಶವಿದೆ.ಆದರೆ ಗ್ರಾಮ ಪಂಚಾಯತಿಯ ಪಮಪ್ ಆಪರೇಟರ್ ನಿರ್ಲಕ್ಷ್ಯದಿಂದಾಗಿ ನಿರು ಬಿಡುತ್ತಿಲ್ಲ.ನೀರು ಬಿಡುವಂತೆ ಕೇಳಿದರೆ ಅಹಂಕಾರದ ಮಾತುಗಳಿಂದ ಜನರನ್ನು ನಿಂದಿಸುತ್ತಾರೆ.ಆದ್ದರಿಂದ ಕೂಡಲೆ ಪಂಪ್ ಆಪರೇಟರನ್ನು ಕೆಲಸದಿಂದ ತೆಗೆಯಬೇಕು.ಮತ್ತು ನದಿಯಿಂದ ನೀರು ತರಲು ನಿರ್ಮಿಸುತ್ತಿರುವ ಪೈಪಲೈನ್ ಕಾಮಗಾರಿ ಬೇಗ ಮುಗಿಸಬೇಕು.ಅಲ್ಲದೆ ಸದ್ಯ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಬೇಕು,ಒಂದು ವೇಳೆ ಈ ನಮ್ಮ ಬೇಡಿಕೆಗಳನ್ನು ನಿರ್ಲಕ್ಷಿಸಿದಲ್ಲಿ ದೇವಾಅಪುರ ಕ್ರಾಸ್ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಲಾಗುವುದೆಂದು ಸರಕಾರಕ್ಕೆ ಒತ್ತಾಯಿಸಿದರು.

ನಂತರ ಮನವಿಯನ್ನು ತಾಲ್ಲುಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜಗದೇವಪ್ಪ ಅವರಿಗೆ ಸಲ್ಲಿಸಿದರು,ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ವಿಭಾಗದ ಗ್ರಾಮೀಣ ನೀರು ಸರಬರಾಜು ಇಂಜಿನಿಯರ್ ಹಣಮಂತಪ್ಪ ಅಂಬಲಿ ಹಾಗು ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯಕ ಬೈರಿಮಡ್ಡಿ,ಸಂಘಟನೆ ದೇವಪುರ ಗ್ರಾಮ ಘಟಕದ ಅಧ್ಯಕ್ಷ ಶಾಂತಗೌಡ ತಾಳಿಕೋಟೆ,ಪ್ರಧಾನ ಕಾರ್ಯದರ್ಶಿ ಮಲ್ಲು ರಾಯಣ್ಣ,ನಾಗರಾಜ ಕಲಕೇರಿ, ಉದಯಕುಮಾರ ಬಾಕಲಿ,ರವಿ ಡಂಬರ,ಯಮನಪ್ಪ ಪೂಜಾರಿ,ರಾಯಪ್ಪ ಪೂಜಾರಿ, ಶರಣಬಸವ ಯಾದವ,ಸಾಬಣ್ಣ ಡಂಬರ,ಮಾನಪ್ಪ ಜುಂಗಿ,ಯಂಕಪ್ಪ ನಾರಬಂಡಿ,ಯಂಕಮ್ಮ ಡಂಬರ, ಮಲ್ಲಮ್ಮ ಡಂಬರ, ಪದ್ಮಣ್ಣ ಇಂಗಳಗಿ, ಮಲ್ಲಪ್ಪ ಕೊಂಗಂಡಿ,ವಿಶ್ವನಾಥ ಜಾಲಹಳ್ಳಿ,ಹುಲ್ಲೇಶ ಗುತ್ತೇದಾರ,ಮಲ್ಲಿಕಾರ್ಜುನ ಸಗರ, ರಾಜಶೇಖರ ಸೂಗುರ,ಶರಣಯ್ಯಸ್ವಾಮಿ ಹಿರೇಮಠ,ಮಾಳಪ್ಪ ಕಾಮನಟಿಗಿ,ಬಲಭೀಮ ಯಮನೂರ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here