ಶಾಸಕ ಡಾ. ಅಜಯ್ ಸಿಂಗ್ ನೇತೃತ್ವದಲ್ಲಿ ಅಧಿಕಾರಿಗಳೊಂದಿಗೆ ಸಭೆ

0
32

ಜೇವರ್ಗಿ: ತಾಲೂಕಿನ ತೀವ್ರ ಮಳೆಯಿಂದ ಹಾನಿಗೀಡಾದ ಬೆಳೆ ಹಾಗೂ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿನ್ನಲೆಯಲ್ಲಿ ಕೃಷಿ, ಆರೋಗ್ಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಶಾಸಕ, ವಿಧಾನ ಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ.ಅಜಯ್ ಸಿಂಗ್ ಅವರು ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಜೇವರ್ಗಿಯ ತಹಸೀಲ್ದಾರರಾದ ಸಿದ್ದರಾಯ್ ಭೋಸಗಿ ಹಾಗೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಉಪಸ್ಥಿರಿದ್ದು, ಬೆಳೆ ಹಾನಿಯಿಂದಾಗಿ ರೈತವರ್ಗವು ತೀವ್ರ ನಲುಗಿ ಹೋಗಿದ್ದು ರೈತರಿಗೆ ನೆರವು ಹಾಗೂ ಪರಿಹಾರದ ಬಗ್ಗೆ ಚರ್ಚೆ ನಡೆಸಿದ್ದರು.

Contact Your\'s Advertisement; 9902492681

ಮಳೆಯಿಂದಾಗಿ ಹದಗೆಟ್ಟಿರುವ ತಾಲೂಕಿನ ರಸ್ತೆ, ಅತಿಯಾದ ಮಳೆಯಿಂದ ಜನರ ಮನೆಗೆ ನೀರು ಹೋಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ, ಕೊರೊನಾ ಪ್ರಕರಣಗಳ ಬಗ್ಗೆ THO ಜೊತೆ ಸಮಗ್ರ ಚರ್ಚೆ ನಡೆಸಿದರು. ಈ ವೇಳೆಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here