ವಾಲ್ಮೀಕಿ ಸಮಾಜದ ಯುವತಿಯ ಅತ್ಯಾಚಾರ ಮಾನವೀಯತೆಯ ಕಗ್ಗೊಲೆ:ದ.ಸಂ.ಸ

0
51

ಜೇವರ್ಗಿ: ಉತ್ತರಪ್ರದೇಶದಲ್ಲಿ 19 ವರ್ಷದ ವಾಲ್ಮೀಕಿ ಸಮಾಯುವತಿಯಾದ ದಲಿತ ಯುವತಿಯಾದ  ಕಾಮುಕ ಯುವಕರು ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದು ಮಾನವೀಯತೆಯ ಕಗ್ಗೊಲೆಯಾಗಿದೆ ಎಂದು ಖಂಡಿಸುತ್ತಾ ದಲಿತ ಸಂಘರ್ಷ ಸಮಿತಿ ಉತ್ತರ ಪ್ರದೇಶದ ಸರಕಾರ ವಜಾಗೊಳಿಸಬೇಕು ಎಂದು ಆಗ್ರಹಿಸಿ ಜೇವರ್ಗಿ ತಹಸೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರಸಲ್ಲಿಸಿದೆ.

ದಲಿತ ಸಂಘರ್ಷ ಸಮಿತಿ ಹಾಗೂ ಮಾದಿಗ ಸಂಘರ್ಷ ಸಮಿತಿಯ ಜಂಟಿಯಾಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದ ಆದಿತ್ಯನಾಥ ಆಡಳಿತವು ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡು ಮಹಿಳೆಯರ ಮೇಲೆ ಶೋಷಣೆ ನಡೆಸುತ್ತಿರುವುದು, ಪ್ರಧಾನಿಗಳು ಹಾಗೂ ಆಡಳಿತ ವ್ಯವಸ್ಥೆ ಕಂಡು ಕಾಣದಂತೆ ಜಾಣ ಕುರುಡತನ ಯಾವ ಪುರುಷಾರ್ಥಕ್ಕಾಗಿ ? ಎಂದು ಪ್ರಶ್ನಿಸಿದರು.

Contact Your\'s Advertisement; 9902492681

ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಮಾಡಿರುವ ಕಾಮುಕರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರ ಕುಟುಂಬಗಳಿಗೆ ಸರಕಾರ ಸೂಕ್ತ ಪರಿಹಾರ ನೀಡಿ ಪೊಲೀಸ್ ಭದ್ರತೆಯನ್ನು ಒದಗಿಸಬೇಕು .ಎಂದು ದಲಿತ ಸಂಘರ್ಷ ಸಮಿತಿ ಹಾಗೂ ಮಾದಿಗ ಸಂಘರ್ಷ ಸಮಿತಿ ತಾಲೂಕ ಶಾಖೆಯ ಜಂಟಿ ಪ್ರತಿಭಟನೆಯಲ್ಲಿ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು .

ಪ್ರತಿಭಟನೆ ಹೋರಾಟದ ನೇತೃತ್ವವನ್ನು ದಲಿತ ಸಂಘರ್ಷ ಸಮಿತಿಯ ತಾಲೂಕ ಸಂಚಾಲಕರಾದ ಸಿದ್ದರಾಮ ಕಟ್ಟಿ, ಸಂಘಟನಾ ಸಂಚಾಲಕರಾದ ಶಿವಕುಮಾರ ಹೆಗಡೆ, ಎಂ ಎಸ್ ಎಸ್ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಬಿಲ್ಲರ್, ಗೌರವ ಅಧ್ಯಕ್ಷ ಮಲ್ಲಪ್ಪ ನರಿಬೋಳ ,ಬಸವರಾಜ ಕಟ್ಟಿ, ಮರಪ್ಪ ಹೂತಿನ ಮಡು, ಶರಣಪ್ಪ ಆಂದೋಲ ,ಎಂ,ಎಸ್ ಎಸ್ ತಾಲೂಕ ಅಧ್ಯಕ್ಷರು , ಅಶೋಕ್ ನೆಲೋಗಿ ಶ್ರೀನಾಥ್ ಕಟ್ಟಿ ,ದೇವರಾಜ ಬಣಮಿ, ಹಿರಗಪ್ಪ ಹೊನ್ನಾಳ. ಮರಿಯಪ್ಪ ಜೇರಟಗಿ, ಸೂರ್ಯಕಾಂತ್ ಬಿರಾಳ, ಅಬ್ದುಲ್ ಘನಿ ಜೇವರ್ಗಿ, ಇತರ ಮುಖಂಡರು ಹಾಗೂ ನೂರಾರು ಜನ ಕಾರ್ಯಕರ್ತರು ಸಾರ್ವಜನಿಕರು ಭಾಗವಹಿಸಿದ್ದರು.

  • ರಾಜು ಮುದ್ದಡಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here