ವಿವಿಧೆಡೆ ದಾಳಿಮಾಡಿ ಬಾಲ ಕಾರ್ಮಿಕರನ್ನು ವಶಕ್ಕೆ ಪಡೆದ ಅಧಿಕಾರಿಗಳು

0
26

ಸುರಪುರ: ನಗರದ ವಿವಿಧೆಡೆಗಳಲ್ಲಿ ಕೆಲಸ ಮಾಡುತ್ತಿದ್ದ ಬಾಲಕಾರ್ಮಿಕರನ್ನು ಬಾಲ ಕಾರ್ಮಿಕ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಪತ್ತೆ ಮಾಡಿ ವಶಕ್ಕೆ ಪಡೆದರು. ನಗರದ ಹಸನಾಪುರ ಪೆಟ್ರೋಲ್ ಬಂಕ್ ಸುರಪುರ ನಗರ ಮತ್ತು ಕುಂಬಾರಪೇಟೆ ಗಂಜ್ ಬಳಿಯ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಒಟ್ಟು ೧೧ ಜನ ಬಾಲ ಕಾರ್ಮಿಕರನ್ನು ಪತ್ತೆ ಮಾಡಿದ ಅಧಿಕಾರಿಗಳು ಎಲ್ಲಾ ಮಕ್ಕಳನ್ನು ವಶಕ್ಕೆ ಪಡೆದು ಕರೆ ತಂದರು.

ನಂತರ ಕಾರ್ಮಿಕ ಇಲಾಖೆಯ ಕಚೇರಿಗೆ ಕರೆತಂದು ಮಕ್ಕಳ ಪೋಷಕರಿಗೆ ಬಾಲ ಕಾರ್ಮಿಕ ಪದ್ಧತಿ ಮತ್ತು ಅದರಿಂದಾಗುವ ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು ಹಾಗು ಮತ್ತೊಮ್ಮೆ ಕೆಲಸಕ್ಕೆ ಸೇರಿಸಿಕೊಂಡಲ್ಲಿ ದಂಡ ವಿಧಿಸಿ ಜೈಲಿಗೆ ಕಳುಹಿಸುವುದಾಗಿ ಕೆಲಸಕ್ಕೆ ಸೇರಿಸಿಕೊಂಡಿದ್ದ ಮಾಲೀಕರಿಗೆ ಎಚ್ಚರಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಲು ತಿಳಿಸಿ ನಂತ ಎಲ್ಲಾ ಮಕ್ಕಳನ್ನು ಬಿಡಿಗಡೆಗೊಳಿಸಿದರು.

Contact Your\'s Advertisement; 9902492681

ತಂಡದಲ್ಲಿ ಕಾರ್ಮಿಕ ಸಹಾಯಕ ಆಯುಕ್ತರು ಕುಮಾರಿ ಶ್ವೇತಾ ಕಂದಾಯ ಇಲಾಖೆಯ ಪ್ರದೀಪ ನಾಲ್ವಡೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧಿಕಾರಿ ಕಾರ್ಮಿಕ ನಿರೀಕ್ಷಕರು ಗಂಗಾಧರ ಸಾಬೆರಾ ಬೇಗಂ ಶಹಾಪುರ ಮಕ್ಕಳ ಸಹಾಯವಾಣಿ ಸಿಬ್ಬಂದಿ ರಮೇಶ ಶಾಂತಗೌಡ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಮಿಕ ಬಂಧುಗಳಾದ ಬಸವರಾಜ ಪೂಜಾರಿ ರಾಜು ಕಲಾಲ್ ಹಾಗು ಸಿಬ್ಬಂದಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here