ಸುರಪುರ: ತಾಲೂಕಿನ ತಿಂಥಣಿಯ ಶ್ರಿ ಮೌನೇಶ್ವರ ದೇವಸ್ಥಾನದಲ್ಲಿ ಅಧಿಕ ಮಾಸ ಹಾಗು ಲೋಕ ಕಲ್ಯಾಣಕ್ಕಾಗಿ ಗಣ ರುದ್ರ ಹೋಮ ಹಾಗು ಮಹಾ ಯಾಗ ನಡೆಸಲಾಯಿತು.
ಈ ಸಂದರ್ಭದಲ್ಲಿ ಮೌನೇಶ್ವರ ದೇವಸ್ಥಾನದ ಅರ್ಚಕ ಶ್ರೀ ಮೌನೇಶ್ವರ ಅರ್ಚಕರು ಮಾತನಾಡಿ,ಅಧಿಕ ಮಾಸದ ಅಂಗವಾಗಿ ದೇವಸ್ಥಾನದಲ್ಲಿ ಗಣ ರುದ್ರ ಹೋಮ ಹಾಗು ಮಹಾ ಯಾಗವನ್ನು ನಡೆಸಲಾಗುತ್ತದೆ.ಇದರ ಮೂಲಕ ಲೋಕಕ್ಕೆ ಕಂಟಕವಾಗಿರುವ ಕೊರೊನಾ ಮಹಾಮಾರಿ ನಿರ್ಮೂಲನೆಯಾಗಲಿ ಹಾಗು ನಾಡಿಗೆ ಮಳೆ ಬೆಳೆ ಚೆನ್ನಾಗಿ ಬಂದು ಜನತೆ ಸುಖ ಸಂತೋಷದಿಂದ ಬದುಕುವಂತಾಗಲಿದೆ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.
ಬೆಳಿಗ್ಗೆ ೬ ಗಂಟೆಗೆ ಆರಂಭವಾದ ಹೋಮ ಯಾಗ ಕಾರ್ಯಕ್ರಮದ ಆರಂಭದಲ್ಲಿ ಸುತ್ತ ಮುತ್ತಲಿನ ನೂರಾರು ಸಂಖ್ಯೆಯ ಭಕ್ತಾದಿಗಳು ಸೇರಿ ನದಿಯಿಂದ ನೀರು ತಂದು ಪೂಜೆಯ ಜೊತೆಗೆ ಮಹಿಳೆಯರಿಂದ ಕುಂಬ ಕಳಸಗಳ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ತಿಂಥಣಿ ಬಂಡೊಳ್ಳಿ ಕಕ್ಕೇರಾ ದೇವಾಪುರ ಅರಳಹಳ್ಳಿ ಸೇರಿದಂತೆ ಅನೇಕ ಗ್ರಾಮಗಳ ಜನರು ಭಾಗವಹಿಸಿದ್ದರು.