ಸುರಪುರ: ಸಚಿವ ರಾಮವಿಲಾಸ್ ಪಾಸ್ವನ್ ನಿಧನಕ್ಕೆ ದಲಿತ ಸೇನೆ ಶ್ರದ್ಧಾಂಜಲಿ

0
44

ಸುರಪುರ: ಕೇಂದ್ರ ಸಚಿವ ರಾಮವಿಲಾಸ್ ಪಾಸ್ವನ್ ನಿಧನಕ್ಕೆ ಸುರಪುರದ ದಲಿತ ಸೇನೆ ತಾಲೂಕು ಘಟಕದಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.ನಗರದ ಗೋಲ್ಡನ್ ಕೇವ್ ಗವಿ ಬುದ್ಧ ವಿಹಾರದಲ್ಲಿ ಸಭೆ ನಡೆಸಿದ ದಲಿತ ಸೇನೆ ಮುಖಂಡರು ರಾಮವಿಲಾಸ್ ಪಾಸ್ವನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಎರಡು ನಿಮಿಷಗಳ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿದರು.

ನಂತರ ದಲಿತ ಸೇನೆ ತಾಲೂಕು ಅಧ್ಯಕ್ಷ ನಿಂಗಣ್ಣ ಗೋನಾಲ ಮಾತನಾಡಿ,ದಲಿತ ಸೇನೆಯ ಸ್ಥಾಪಕರಾಗಿದ್ದ ರಾಮವಿಲಾಸ್ ಪಾಸ್ವನ್ ಅವರ ನಿಧನ ದೇಶಕ್ಕೆ ಹಾಗು ದಲಿತ ಸಮುದಾಯಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದರು.ಅವರು ದಲಿತ ಸೇನೆಯ ಮೂಲಕ ದೇಶದಲ್ಲಿನ ದಲಿತ ಸಮುದಾಯದ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ರೂಪಿಸಿದವರು.ಇಂದು ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿರುವುದರಿಂದ ಅನಾಥ ಭಾವ ಕಾಡುತ್ತಿದೆ ಎಂದರು.

Contact Your\'s Advertisement; 9902492681

ಮಾಜಿ ನಗರಸಭೆ ಅಧ್ಯಕ್ಷ ಚಂದ್ರಶೇಖರ ಹಸನಾಪುರ ಮಾತನಾಡಿ,ದಲಿತರ ರಾಜಕೀಯ ಶಕ್ತಿಯಾಗಿ ಬೆಳೆದಿದ್ದ ರಾಮವಿಲಾಸ್ ಪಾಸ್ವನ್ ಅವರು ಕೇಂದ್ರ ಸಚಿವರಾಗಿ ಅನೇಕ ಜನಪರವಾದ ಕೆಲಸ ಮಾಡಿದವರು.ಅಲ್ಲದೆ ಎನ್‌ಡಿಎ ಸರಕಾರ ರಚನೆಯಲ್ಲಿ ಪಾತ್ರ ವಹಿಸಿದ್ದ ಪಾಸ್ವನ್ ಅವರ ನಿಧನ ದೇಶಕ್ಕೆ ದೊಡ್ಡ ನಷ್ಟ ಎಂದರು.

ಸಭೆಯಲ್ಲಿ ಹಣಮಂತ ಕುಂಬಾರಪೇಟೆ ಮಾನಪ್ಪ ಝಂಡದಕೇರಾ ಹುಲಗಪ್ಪ ದೇವತ್ಕಲ್ ನಾಗು ಗೋಗಿಕೇರಾ ಮದುಸೂಧನ ಬಸವರಾಜ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here