ಸುರಪುರ ಜೆಡಿಎಸ್‌ನಿಂದ ಜಯಪ್ರಕಾಶ ನಾರಾಯಣ ಜನ್ಮ ದಿನಾಚರಣೆ

0
48

ಸುರಪುರ: ನಗರದ ಉಸ್ತಾದ ಮಂಜಿಲ್‌ನಲ್ಲಿ ಲೋಕ ನಾಯಕ ಜಯಪ್ರಕಾಶ ನಾರಾಯಣ ಅವರ ಜನ್ಮ ದಿನವನ್ನು ಆಚರಿಸಲಾಯಿತು.ಮೊದಲಿಗೆ ಜಯಪ್ರಕಾಶ ನಾರಾಯಣ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.

ನಂತರ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಉಸ್ತಾದ್ ವಜಾಹತ್ ಹುಸೇನ್ ಮಾತನಾಡಿ,ಜಯಪ್ರಕಾಶ ನಾರಾಯಣ ಅವರು ಈ ದೇಶ ಕಂಡ ಮಹಾನ್ ನಾಯಕರಲ್ಲಿ ಒಬ್ಬರು ಅವರು ಇಡೀ ದೇಶದಲ್ಲಿ ಹೊಸದೊಂದು ರಾಜಕೀಯ ಶಕ್ತಿಯನ್ನು ಹುಟ್ಟುಹಾಕಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.ಅಲ್ಲದೆ ಮುಂಬರುವ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸಕ್ರೀಯವಾಗಿ ನಾವೆಲ್ಲರು ಕೆಲಸ ಮಾಡಿ ನಮ್ಮ ಪಕ್ಷದ ಅಭ್ಯಾರ್ಥಿಯಾದ ತಿಮ್ಮಯ್ಯ ಪುರ್ಲೆಯವರನ್ನು ಬೆಂಬಲಿಸೋಣ ಎಂದರು.

Contact Your\'s Advertisement; 9902492681

ನಂತರ ಮುಖಂಡ ಸಂಗಣ್ಣ ಬಾಕ್ಲಿ ಮಾತನಾಡಿ,ಜಯಪ್ರಕಾಶ ನಾರಾಯಣ ಅವರು ಸದಾಕಾಲ ಪ್ರಜಾಪ್ರಭುತ್ವದ ತಳಹದಿಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದರು.ಅಂದು ಜಾತ್ಯಾತೀತ ಎಲ್ಲಾ ನಾಯಕರನ್ನು ಒಂದುಗೂಡಿಸುವ ಮೂಲಕ ಮೊರಾರ್ಜಿ ದೇಸಾಯಿಯವರು ಪ್ರಧಾನಿಯಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೀರ್ತಿ ಜಯಪ್ರಕಾಶ ನಾರಾಯಣರಿಗೆ ಸಲ್ಲುತ್ತದೆ ಎಂದರು.

ನಾವೆಲ್ಲರು ಒಗ್ಗಟ್ಟಾಗಿ ನಮ್ಮ ಮತಕ್ಷೇತ್ರದ ಶಿಕಷಕರ ಬಳಿಗೆ ಹೋಗಿ ತಮ್ಮ ಮತವನ್ನು ಜೆಡಿಎಸ್ ಅಭ್ಯಾರ್ಥಿ ತಿಮ್ಮಯ್ಯ ಪುರ್ಲೆಯವರಿಗೆ ನೀಡುವಂತೆ ಮನವಿ ಮಾಡುವ ಮೂಲಕ ನಮ್ಮ ಅಭ್ಯಾರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡೋಣ ಎಂದರು.ಈ ಸಂದರ್ಭದಲ್ಲಿ ಶಾಂತು ತಳವಾರಗೇರಾ ಶೌಕತ್ ಅಲಿ ಎಮ್.ಡಿ ಬಾಬಾ ಅಲ್ತಾಪ್ ಸಗರಿ ಗೌಸ್ ನೌಕಾರ ವಿನಯ ಕಕ್ಕೇರಾ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here