ಸರಕಾರಿ ನೌಕರರ ಸಂಘದ ಭವನಕ್ಕೆ ಜಾಗ ನೀಡಲು ಮನವಿ

0
46

ಶಹಾಬಾದ:ತಾಲೂಕಿನಲ್ಲಿ ಸರಕಾರಿ ನೌಕರರ ಸಂಘದ ಭವನದ ನಿರ್ಮಾಣಕ್ಕೆ ಜಾಗವನ್ನು ನೀಡಬೇಕೆಂದು ಆಗ್ರಹಿಸಿ ತಾಲೂಕಾ ಸರಕಾರಿ ನೌಕರರ ಸಂಘದ ಪದಾಧಿಕಾರಿಗಳು ಉಪತಹಸೀಲ್ದಾರ ಮಲ್ಲಿಕಾರ್ಜುನರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸರಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ, ಶಹಾಬಾದ ನೂತನ ತಾಲೂಕು ರಚನೆಯಾದ ನಂತರ ಸರಕಾರಿ ನೌಕರರ ಸಂಘದ ರಚನೆಯಾಗಿದೆ.ಕಳೆದ ಒಂದು ವರ್ಷದಿಂದ ಸಂಘದ ಕಾರ್ಯಚಟುವಟಿಕೆಗಳನ್ನು ಮಾಡಲು ಸ್ವಂತ ಜಾಗವಿಲ್ಲ.ಅಲ್ಲದೇ ಕಟ್ಟಡವಿಲ್ಲ.ಯಾವುದೇ ಕಾರ್ಯಕ್ರಮಗಳು, ಸಭೆಗಳನ್ನು ಮಾಡಬೇಕಾದರೆ ಸರಕಾರಿ ಶಾಲೆಯ ಖಾಲಿ ಇರುವ ಕೋಣೆಯಲ್ಲಿ ಮಾಡುವಂತ ಅನಿವಾರ್ಯತೆ ಎದುರಾಗಿದೆ.ಆದ್ದರಿಂದ ನಮ್ಮ ಸಂಘದ ಚಟುವಟಿಕೆಗಳನ್ನು ನಡೆಸಲು ಮತ್ತು ಕಟ್ಟಡ ನಿರ್ಮಾಣ ಮಾಡಲು ಎರಡು ಎಕರೆ ಜಾಗವನ್ನು ನೀಡಬೇಕೆಂದು ಮನವಿ ಮಾಡಿದರು.

Contact Your\'s Advertisement; 9902492681

ಸಂಘದ ರಾಜ್ಯ ಪರಿಷತ್ ಸದಸ್ಯ ಶಶಿಕಾಂತ ಭರಣಿ, ಪ್ರಧಾನ ಕಾರ್ಯದರ್ಶಿ ಸಂಜಯ ರಾಠೋಡ,ಖಜಾಂಚಿ ರಮೇಶ ಕುಲಕಣರ್ಿ, ಸದಸ್ಯರಾದ ಡಾ.ಸಂಧ್ಯಾ ಕಾನೇಕರ, ಬಸವರಾಜ ಕೊಳಕೂರ, ಶಾಂತಮಲ್ಲ ಶಿವಭೋ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here