ದೇಶ ಕಂಡ ಅದ್ಬುತ ಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ: ಮಲ್ಲಿನಾಥ ದೇಶಮುಖ

0
23

ಕಲಬುರಗಿ: ಭಾರತ ದೇಶದ ಇತಿಹಾಸದಲ್ಲಿ ಅಚ್ಚು ಅಳಿಯದ ಹಾಗೆ ಛಾಪು ಮೂಡಿಸಿದ ಏಕೈಕ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್‌ ಕಲಾಂ ಅವರು ಅದ್ಬುತ ಜ್ಞಾನಿ, ವಿಜ್ಞಾನಿ, ಅಪ್ರತಿಮ ದೇಶ ಭಕ್ತ ಎಂದು ವಿದ್ಯಾನಗರ ವೇಲಫೇರ ಸೊಸೈಟಿ ಅದ್ಯಕ್ಷ ಮಲ್ಲಿನಾಥ ದೇಶಮುಖ ಬಣಿಸಿದ್ದಾರೆ.

ಇಂದು ಪ್ರಗತಿ ಕಾಲೋನಿಯಲ್ಲಿ ಶ್ರೀ ಶಕ್ತಿ ಮಹಿಳಾ ಅಭಿವೃದ್ಧಿ ಸಂಸ್ಥೆ ಹಮ್ಮಿಕೊಂಡು ಡಾ.ಎ.ಪಿ ಜೆ ಅಬ್ದುಲ್ ಕಲಾಂ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.

Contact Your\'s Advertisement; 9902492681

ಗುಣ ಹಾಗೂ ಜ್ಞಾನವುಳವರಿಗೆ ಅಧಿಕಾರ ಸಿಕ್ಕರೆ ಅವರು ಅಮರರಾಗುತ್ತಾರೆ ಎಂಬುದಕ್ಕೆ ಕಲಾಂ ಅವರೇ ಜೀವಂತ ಸಾಕ್ಷಿ ಎಂದು ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿ ಅವರು ಅಭಿಪ್ರಾಯ ಪಟ್ಟರು.

ಶ್ರೀ ಶಕ್ತಿ ಮಹಿಳಾ ಅಭಿವೃದ್ಧಿ ಸಂಸ್ಥೆ ಅದ್ಯಕ್ಷ ರಾದ ವಿಜಯಲಕ್ಷ್ಮಿಶೀಲವಂತ ಅಧ್ಯಕ್ಷತೆ ವಹಿಸಿದ್ದರು, ಶ್ರೀ ದಾಶಿಮಯ್ಯ ಸಮಜ ಸೇವಾ ಬಳಗದ ಪ್ರಧಾನ ಕಾರ್ಯದರ್ಶಿ ವಿನೋದ ಕುಮಾರ ಜನೆವೇರಿ, ರಾಜೇಂದ್ರ ಶೀಲವಂತ, ಮಡಿವಾಳಪ್ಪ ಸಜ್ಜನ, ಆದಪ್ಪ ಸಿಕೇದ್ ರವಿ ರಗಟೆ,ಸಂತೋಷ ನಿಂಬೂರ, ಕಲ್ಯಾಣಪ್ಪ ಪಾಟೀಲ ಮನು ಶೀಲವಂತ, ಶಿವಾನಿ ಶೀಲವಂತ ಸೇರಿದಂತೆ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here