ನನಗೆ ಕೊರೊನಾ ಸೊಂಕೆ ತಗುಲಿಲ್ಲ ಹರಿದಾಡುತ್ತಿರುವ ಸುದ್ದಿ ಸುಳ್ಳು: ರಾಜುಗೌಡ ಸ್ಪಷ್ಟನೆ

0
163

ಸುರಪುರ: ನಾನು ಇಲ್ಲಿಯ ವರೆಗೆ ೧೧ ಬಾರಿ ಕೊರೊನಾ ಪರೀಕ್ಷೆ ಮಾಡಿಸಿದ್ದೇನೆ ಆದರೆ ಇಲ್ಲಿಯವರೆಗೆ ನನಗರ ಕೊರೊನಾ ಪಾಸಿಟಿವ್ ಬಂದಿಲ್ಲ,ಆದರೆ ನನಗೆ ಕೊರೊನಾ ಪಾಸಿಟಿವ್ ಬಂದಿದೆ,ಚಿಕಿತ್ಸಾ ವೆಚ್ಚವಾಗಿ ೧೨ ಲಕ್ಷ ರೂಪಾಯಿ ಸರಕಾರದಿಂದ ಪಡೆದಿರುವುದಾಗಿ ಸುಳ್ಳು ಸುದ್ದಿಯನ್ನು ಹರಡಲಾಗಿದೆ ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ವೀಡಿಯೊ ಸಂದೇಶ ಒಂದನ್ನು ನೀಡಿರುವ ಅವರು,ಖಾಸಗಿ ಸುದ್ದಿ ವಾಹಿನಿಯೊಂದು ನನಗೆ ಕೊರೊನಾ ಬಂದಿದೆ,ಕೊರೊನಾದ ಚಿಕಿತ್ಸೆಗಾಗಿ ಸರಕಾರದಿಂದ ೧೨ ಲಕ್ಷ ರೂಪಾಯಿಗಳ ಚಿಕಿತ್ಸಾ ವೆಚ್ಚ ಪಡೆದಿರುವುದಾಗಿ ಸುದ್ದಿ ಹರಡಲಾಗಿದೆ.ಇದು ಸತ್ಯಕ್ಕೆ ದೂರವಾಗಿದೆ.

Contact Your\'s Advertisement; 9902492681

ಸುದ್ದಿ ಪ್ರಸಾರ ಮಾಡುವವರು ನನ್ನಿಂದ ಯಾವುದೇ ಮಾಹಿತಿಯನ್ನು ಪಡೆಯದೆ ಸುಳ್ಳು ಸುದ್ದಿ ಹಬ್ಬಿಸಿರುವುದು ಬೇಸರ ಮೂಡಿಸಿದೆ.ಸ್ಪಷ್ಟತೆ ಇಲ್ಲದೆ ಸುಳ್ಳು ಸುದ್ದಿ ಹರಡುವುದು ಸರಿಯಲ್ಲ.ನಾನು ಅನೇಕ ಜನರು ಸಂಕಷ್ಟದಲ್ಲಿರುವಾಗ ನೆರವಾಗಿದ್ದೇನೆ,ಆದರೆ ನಾನು ಸರಕಾರದಿಂದ ಚಿಕಿತ್ಸಾ ವೆಚ್ಚ ಪಡೆದಿರುವುದಾಗಿ ಹೇಳುವ ಮೂಲಕ ಜನರಲ್ಲಿ ತಪ್ಪು ಸಂದೇಶ ಹರಡುವುದು ನೋವಿನ ಸಂಗತಿಯಾಗಿದೆ.

ಯಾರೇ ಆಗಲಿ ನನಗೆ ಕೊರೊನಾ ಸೊಂಕು ತಗುಲಿದ್ದರ ಬಗ್ಗೆ ಚರ್ಚೆ ಮಾಡುವುದಾದರೆ ಮಾಡಲಿ ಅದು ಬಿಟ್ಟು ವಿಷಯ ಸ್ಪಷ್ಟನೆ ಇಲ್ಲದೆ ಸುದ್ದಿ ತೋರಿಸುವುದನ್ನು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here