ಅಪರಾಧ ಮಾಡಿ ಜೈಲು ಶಿಕ್ಷೆ ಅನುಭವಿಸಿದವರಿಗೆ 10 ಸಾವಿರ ದಂಡ ವಿಧಿಸಿ ಬಿಡುಗಡೆ

0
103

ಸುರಪುರ: ಸಜಾ ಬಂದಿ ಅಪರಾಧಿಗಳಿಬ್ಬರಿಗೆ ಸನ್ನಡತೆ ಆಧಾರದ ಮೇಲೆ ತಲಾ ೧೦ ಸಾವಿರ ರೂಪಾಯಿಗಳ ದಂಡ ವಿಧಿಸಿ ಬಿಡುಗಡೆ ಮಾಡಿದ ತೀರ್ಪೊಂದು ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ನೀಡಿದ್ದಾರೆ.

ತಾಲೂಕಿನ ದೇವರ ಗೋನಾಲ ಗ್ರಾಮದ ನಿಂಗಯ್ಯ ಯಮನಪ್ಪ ಹಾಗು ಹಣಮಥ ಭಾಗಣ್ಣ ಎಂಬ ಇಬ್ಬರು ಸಜಾ ಬಂದಿ ಅಪರಾಧಿಗಳು ೨೦೧೫ರಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಸಲಿಕೆಯಿಂದ ಹೊಡೆದು ಗಾಯಗೊಳಿಸಿದ್ದ ಆರೋಪಕ್ಕೆ ಸಂಬಂದಪಟ್ಟಂತೆ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಆರೋಪಿತರ ವಿರುದ್ದ ಆರೋಪ ಸಾಬೀತಾಗಿ ಶಿಕ್ಷೆ ಪ್ರಕಟಿಸಲಾಗಿತ್ತು.

Contact Your\'s Advertisement; 9902492681

ಈಗ ನ್ಯಾಯಧೀಶರಾದ ಚಿದಾನಂದ ಬಡಿಗೇರ ಅವರು ಅಪರಾಧಿ ಪರೀವೀಕ್ಷಣಾ ಅಧಿನಿಯಮ ಕಲಂ ೪ ರಡಿಯಲ್ಲಿ ಪ್ರಕರಣದ ವಿಚಾರಣೆ ನಡೆಸಿ ಸನ್ನಡತೆ ಆಧಾರದ ಮೇಲೆ ಆರೋಪಿಗಳನ್ನು ಬಿಡುಗಡೆ ಗೊಳಿಸಿದ್ದು,ಇಬ್ಬರು ಅಪರಧಿಗಳಿಗೆ ತಲಾ ೧೦ ಸಾವಿರ ದಂಡ ವಿಧಿಸಿ ಎರಡು ವರ್ಷಗಳವರೆಗೆ ಯಾವುದೇ ಅಪರಾಧಿಕ ಕೃತ್ಯದಲ್ಲಿ ಭಾಗವಹಿಸದಂತೆ ಷರತ್ತು ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here