ಸಗರನಾಡಿಗೆ ಸಿಕ್ಕ ಗೌರವ.

0
48

ಶಹಾಪುರ: ಸರ್ಕಾರ ಈ ಬಾರಿ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ಕೇವಲ ನನಗೆ ಅಷ್ಟೇ ಸಿಕ್ಕಿದ್ದೆಲ್ಲ ಇಡೀ ಸಗರನಾಡಿಗೆ ಸಿಕ್ಕ ಗೌರವವಾಗಿದೆ ಎಂದು ಖ್ಯಾತ ಸಂಶೋಧಕ ಹಿರಿಯ ಸಾಹಿತಿಗಳಾದ ಡಿ.ಎನ್.ಅಕ್ಕಿ ಹೇಳಿದರು.

ವನದುರ್ಗ ಗ್ರಾಮದ ಮಹಾಂತೇಶ ದೊರೆ ಹಾಗೂ ಭಾಗ್ಯ ದೊರೆ ದಂಪತಿಗಳು ಹಮ್ಮಿಕೊಂಡಿರುವ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವ ಅನುಭವ ನನಗಿದೆ ಈ ಹಿಂದೆಯೂ ಕೂಡ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು ಎಂದು ಹೇಳಿದರು.

Contact Your\'s Advertisement; 9902492681

ಪ್ರಶಸ್ತಿ ಪುರಸ್ಕಾರಗಳಿಗೆ ಎಂದು ಮನುಷ್ಯ ಬೆನ್ನು ಹತ್ತಬಾರದು ನಾನು ಯಾವುದಕ್ಕೂ ಪ್ರಶಸ್ತಿಗಾಗಿ ಹಿಂದೆ ಬಿದ್ದಿವನಲ್ಲ ನನ್ನ ಸಾಹಿತ್ಯ ಕೃಷಿಯನ್ನು ನೋಡಿ ಸರ್ಕಾರ ಈ ಬಾರಿ ಪ್ರಶಸ್ತಿ ನೀಡಿದೆ ನನಗಂತೂ ತುಂಬಾ ಖುಷಿ ನೀಡಿದೆ ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here