ಹಳೆ ಕಾರು ವ್ಯಾಪರಿಗೆ ಅಪಹರಿಸಿ ಕೊಲೆ; ಮೂವರು ಆರೋಪಿಗಳ ಬಂಧನ

0
78

ಕಲಬುರಗಿ: ಹಳೆ ಕಾರು ರಿಪೇರಿ ಮಾಡಿ ಮಾರಾಟ ವ್ಯವಹಾರದಲ್ಲಿ ತಕರಾರರು ಉಂಟಾದ ಹಿನ್ನೆಯಲ್ಲಿ ವ್ಯಾಪಾರ ಹಿತೈಷಿಗಳೆ ಅಪಹರಿ, ಕೊಲೆ ಮಾಡಿ, ನದಿಗೆ ಬಿಸಾಕಿ ಪರರಾಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಯದ್ದುಲ್ಲಾಹ ಕಾಲೋನಿಯ ನಿವಾಸಿಯಾಗಿರುವ ಗೌಸೋದ್ದಿನ್ ಖಾಜಾಮೈನೋದ್ದಿನ್ (42) ಕೊಲೆಯಾದ ದುರ್ದೈವಿ. ಗೌಸೋದ್ದಿನ್ ಅವರು ಹಳೆ ಕಾರುಗಳನ್ನು ಖರೀದಿಸಿ ಅವುಗಳನ್ನು ದುರಸ್ಥಿಗೊಳಿಸಿ ಮಾರಾಟ ಮಾಡುತ್ತಿದ್ದರು. ಕಾರುಗಳಿಂದ ಬಂದ ಲಾಭದಲ್ಲಿ ವ್ಯಾಪಾರ ಹಿತೈಷಿಗಳದಾ ಸ್ನೇಹಿತರ ಜೊತೆ ಸಮಾನವಾಗಿ ಹಂಚಿಕೊಳುತ್ತಿದ್ದರು ಎನ್ನಲಾಗಿದೆ.

Contact Your\'s Advertisement; 9902492681

ವ್ಯಾಪಾರದಲ್ಲಿ ತಕರಾರು ಉಂಟಾಗಿ, ವೈಷಮ್ಯದಿಂದ ಗೌಸೋದ್ದಿನ್ ಅವರಿಗೆ ಅವರ ಸಂಗಡಿಗರಾದ ಫೈಯಾಜ್, ನಿಜಾಮ್ ಬಾವರ್ಚಿ ಹಾಗೂ ವಾಜೀದ್ ಮೂವರು ಸೇರಿ ಕಾರಿನಲ್ಲಿ ಅಪಹರಿಸಿ, ಕುತ್ತಿಗೆಗೆ ಹಗ್ಗ ಬಿಗಿದು ಉಸಿರು ಗಟ್ಟಿಸಿ ಕೊಲೆ ಮಾಡಿ, ನಂತರ ಶವವನ್ನು ಜಿಲ್ಲೆಯ ಕುರಿಕೋಟಾ ಗ್ರಾಮದ ಹಳೆ ಬ್ರೀಡ್ಜ್ ಹತ್ತಿರ ಸೇತುವೆ ಮೇಲಿಂದ ನೀರಿನಲ್ಲಿ ಬಿಸಾಕಿ ಪರಾರಿಯಾಗಿದರು ಎಂದು ತಿಳಿದುಬಂದೆ.

ಪ್ರಕರಣವನ್ನು ಕುರಿತು ಪೊಲೀಸ್ ಆಯುಕ್ತರು ಗಂಭೀರವಾಗಿ ಪರಿಗಣಿಸಿ ರೋಜಾ ಪೊಲೀಸ್ ಠಾಣೆಯ ಪಿಐ ಎಸ್.ಅಸ್ಲಮ್ ಬಾಷಾ ಅವರ ನೇತೃತ್ವದ ಎ.ಎಸ್.ಐ ಶಿವಪ್ಪ ಕಮಾಂಡೋ, ಎ.ಎಸ್.ಐ ನಿಜಲಿಂಗಪ್ಪ, ಸಿಕಂದರ್ ಖಾನ್, ರಫೀಕ್, ಗೋಪಾಲ, ಇರ್ಫಾನ್, ಈರಣ್ಣ, ಮದರಸಾಬ್, ಸಿಬ್ಬಂದಿಗಳ ವಿಶೇಷ ತಂಡ ಸತತ್ತ ಕಾರ್ಯಾಚರಣೆಯಿಂದ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಕುರಿತು ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here