ಸುರಪುರ ವಸಂತ ಮಹಲ್‌ನಲ್ಲಿ ಯುವ ಕಾಂಗ್ರೆಸ್ ಸಭೆ

0
180

ಸುರಪುರ: ಕಾಂಗ್ರಸ್ ಪಕ್ಷ ದೇಶದಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಾದರೆ ಯುವ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಪಾತ್ರ ಮುಖ್ಯವಾಗಿದೆ ಎಂದು ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ್ ಯಾದವ್ ಮಾತನಾಡಿದರು.

ನಗರದ ವಸಂತ ಮಹಲ್‌ನ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಯುವ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಹಾಗು ಕಾರ್ಯಕರ್ತರ ಜಾಗೃತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿ,ಯಾದಗಿರಿ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಕಾರ್ಯ ಉತ್ತಮವಾಗಿದೆ,ಮುಂಬರುವ ದಿನಗಳಲ್ಲಿ ರಾಜಾ ವೆಂಕಟಪ್ಪ ನಾಯಕ ಅವರು ಶಾಸಕರಾಗುವುದು ಸತ್ಯವಾಗಿದೆ.ಆ ನಿಟ್ಟಿನಲ್ಲಿ ಮುಖಂಡರಾದ ರಾಜಾ ರೂಪಕುಮಾರ ನಾಯಕ ರಾಜಾ ವೇಣುಗೋಪಾಲ ನಾಯಕರ ಮಾರ್ಗದರ್ಶನದಲ್ಲಿ ಯುವಕರು ಕೆಲಸ ಮಾಡುವಂತೆ ಕರೆ ನೀಡಿದರು.

Contact Your\'s Advertisement; 9902492681

ನಂತರ ಮುಖಂಡ ರಾಜಾ ಕುಮಾರ ನಾಯಕ ಮಾತನಾಡಿ,ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಅವರು ಕರೆ ನೀಡಿದಂತೆ ಜಿಲ್ಲೆಯಾದ್ಯಂತ ಈಗಾಗಲೇ ೫ ಸಾವಿರ ಯುವ ಕಾಂಗ್ರೆಸ್ ಸದಸ್ಯತ್ವ ಮಾಡಿಸಲಾಗಿದ್ದು ಇನ್ನೂ ಮೂರು ಸಾವಿರದಷ್ಟು ಸದಸ್ಯತ್ವ ಮಾಡಿಸುವುದಾಗಿ ತಿಳಿಸಿದರು.ಅಲ್ಲದೆ ಯುವ ಕಾಂಗ್ರೆಸ್‌ನ ಯಾವುದೇ ಕಾರ್ಯಕರ್ತರು ಯಾವ ಕಾರಣಕ್ಕೂ ಹೆದರಬೇಕಿಲ್ಲ ನಿಮ್ಮೊಂದಿಗೆ ಸದಾಕಾಲ ನಾವೆಲ್ಲರು ಇರುವುದಾಗಿ ಭರವಸೆ ನೀಡಿದರು. ಮುಂಬರು ದಿನಗಳಲ್ಲಿ ಪಕ್ಷವನ್ನು ಎಲ್ಲಾ ನಿಟ್ಟಿನಲ್ಲಿ ಸದೃಢಗೊಳಿಸೋಣ ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ಚೇತನ್ ಗೋನಾಯಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ಯುವ ಮುಖಂಡ ರಾಜಾ ವೇಣುಗೋಪಾಲ ನಾಯಕ ಡೇವಿಡ್ ಮುದನೂರ ಶರಣು ಗೋನಾಲ ಪ್ರಶಾಂತ ಉಗ್ರಂ ಮತ್ತಿತರರು ಮಾತನಾಡಿದರು.ಇದಕ್ಕೂ ಮುನ್ನ ಅನಿಲಕುಮಾರ್ ಯಾದವ್ ಅವರನ್ನು ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಿಂದ ವಸಂತ ಮಹಲ್ ವರೆಗೆ ಸಾವಿರಾರು ಕಾರ್ಯಕರ್ತರು ಬೃಹತ್ ಬೈಕ್ ರ‍್ಯಾಲಿ ಮೂಲಕ ಮೆರವಣಿಗೆ ನಡೆಸಿ ಕರೆ ತಂದರು.

ಈ ಸಂದರ್ಭದಲ್ಲಿ ಮುಖಂಡರಾದ ರಾಜಾ ರೂಪಕುಮಾರ ನಾಯಕ ರಾಜಾ ವಿಜಯಕುಮಾರ ನಾಯಕ ರಾಜಾ ಸುಶಾಂತ ನಾಯಕ ಮುಖಂಡರಾದ ಸುಗುರೇಶ ವಾರದ ಶರಣು ಮುಧೋಳ ಮಲ್ಲು ಯಾದವ್ ಪ್ರಕಾಶ ಯಾದವ್ ಆನಂದ ಮುಧೋಳ ದಾವೂದ್ ಪಠಾಣ್ ಸುಲೇಮಾನ್ ರಮೇಶ ಅರಕೇರಿ ಶರಣು ಸೋಲಾಪುರ ಸೇರಿದಂತೆ ಅನೇಕ ಮುಖಂಡರು ಹಾಗು ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here