ಡಾ.ಬಾಬು ಜಗಜೀವನರಾಮ ಭವನಕ್ಕೆ ಜಾಗ ಮಂಜೂರಾತಿ ಮಾಡಿ

0
83

ಶಹಾಬಾದ:ನಗರದಲ್ಲಿ ಡಾ.ಬಾಬು ಜಗಜೀವನರಾಮ ಅವರ ಸಮುದಾಯ ಭವನ ನಿರ್ಮಾಣ ಮಾಡಲು ಜಾಗವಿಲ್ಲದ ಕಾರಣ, ಸರ್ಕಾರಿ ಗೈರಾಣಿ ಜಮೀನಿನಲ್ಲಿ ಎರಡು ಎಕರೆ ಜಾಗ ಮಂಜೂರಾತಿ ಮಾಡಬೇಕೆಂದು ಒತ್ತಾಯಿಸಿ ಶುಕ್ರವಾರ ಕರ್ನಾಟಕ ನವನಿರ್ಮಾಣ ವೇದಿಕೆಯ ವತಿಯಿಂದ ತಹಸೀಲ್ದಾರ ಸುರೇಶ ವರ್ಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನಂತರ ಮಾತನಾಡಿದ ಕರ್ನಾಟಕ ನವನಿರ್ಮಾಣ ವೇದಿಕೆಯ ಜಿಲ್ಲಾಧ್ಯಕ್ಷ ಚಂದ್ರಕಾಂತ.ಕೆ.ನಾಟೀಕಾರ, ಈಗಾಗಲೇ ಡಾ.ಬಾಬು ಜಗಜೀವನರಾಮ ಅವರ ಸಮುದಾಯ ಭವನ ನಿರ್ಮಾಣ ಮಾಡಲು 2016-17ನೇ ಸಾಲಿನಲ್ಲಿ 1 ಕೋಟಿ ರೂಪಾಯಿ ಮಂಜೂರಾಗಿದ್ದು, ಸದರಿ ಭವನದ ನಿರ್ಮಾಣ ಮಾಡಲು ನಗರದಲ್ಲಿ ಜಾಗವಿಲ್ಲ.ಆದ್ದರಿಂದ ಸರಕಾರಿ ಗೈರಾಣಿ ಜಮೀನು ಸರ್ವೆ ನಂ.184 ರಲ್ಲಿ 27 ಎಕರೆ 38 ಗುಂಟೆ ಜಮೀನು ಲಭ್ಯವಿದೆ.ಆ ಜಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಎರಡು ಎಕರೆ ಜಮೀನು ಮಂಜೂರು ಮಾಡಬೇಕು.ಇದರಿಂದ ಪರಿಶಿಷ್ಟ ಜಾತಿ ಸಮುದಾಯದವರಿಗೆ ಮದುವೆ, ವಿಚಾರಗೋಷ್ಠಿ, ವಿಚಾರ ಸಂಕೀರಣ, ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಮಾಡಲು ಅನುಕೂಲವಾಗುತ್ತದೆ.ಆದ್ದರಿಂದ ಕೂಡಲೇ 2 ಎಕರೆ ಜಮೀನು ಮಂಜೂರು ಮಾಡಿ, ಭವನದ ನಿಮರ್ಾಣಕ್ಕೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.

Contact Your\'s Advertisement; 9902492681

ಕರ್ನಾಟಕ ನವನಿರ್ಮಾಣ ವೇದಿಕೆಯ ಕಲಬುರಗಿ ನಗರಾಧ್ಯಕ್ಷ ಸುದರ್ಶನ.ಎಸ್, ಕರ್ನಾಟಕ ನವನಿರ್ಮಾಣ ವೇದಿಕೆಯ ಶಹಾಬಾದ ಅಧ್ಯಕ್ಷ ನಾಗರಾಜ ಮುದ್ನಾಳ, ಉಪಾಧ್ಯಕ್ಷ ದ್ವಾರಕನಾಥ ಭಂಡಾರಿ, ಪ್ರಧಾನ ಕಾರ್ಯದರ್ಶಿ ಅಂಬರೇಷ ಮೈನಾಳಕರ್,ಕಾರ್ಯದರ್ಶಿ ರೇವಣಸಿದ್ದಪ್ಪ ಪಸಪುಲ್, ಸಹಕಾರ್ಯದರ್ಶಿ ರವಿ ಹುಸನಪ್ಪಾ, ಶಿವರಾಜ ಕೋರೆ, ರವಿ ಬೆಳಮಗಿ, ಶರಣು ಪಗಲಾಪೂರ,ಕರ್ಣ ಕಾಳನೂರ,ನಾಗಪ್ಪ ರಾಯಚೂರಕರ್,ನಂದಕಿಶೋರ ಕಾಂಬಳೆ, ಮರಲಿಂಗ ಮಂಡಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here