ಕ್ಷುಲ್ಲಕ ಕಾರಣಕ್ಕೆ ಜ್ಯೋತಿಷಿ ಕೊಲೆ: 6 ಜನ ವಶಕ್ಕೆ

0
244

ಕಲಬುರಗಿ: ಚಹಾ ಹೋಟೆಲ್‌ನಲ್ಲಿ ಗ್ರಾಹಕರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳದಲ್ಲಿ ಜ್ಯೋತಿಷಿಯೊಬ್ಬ ಹಾಡುಹಗಲೇ ಕೊಲೆಯಾದ ಘಟನೆ ಶುಕ್ರವಾರ ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದಲ್ಲಿ ಸಂಭವಿಸಿದೆ.

ಹಳಕರ್ಟಿ ಗ್ರಾಮದ ಸುರೇಶ ಭೀಮರಾವ ವಾಸ್ಟರ್ (58) ಕೊಲೆಯಾದ ವ್ಯಕ್ತಿ. ರಾಜಕೋಟ್ ನಗರದಲ್ಲಿ ಜ್ಯೋತಿಷ್ಯ ಹೇಳಿ ಜೀವನ ನಡೆಸುತ್ತಿರುವ ಮೃತ ಸುರೇಶ ವಾಸ್ಟರ್, ಹಳಕರ್ಟಿ ಗ್ರಾಮದಲ್ಲಿ ಸ್ವಂತ ಜಮೀನು ಮತ್ತು ಮನೆ ಹೊಂದಿದ್ದಾರೆ. ಜಮೀನು ನೊಂದಣಿ ವಿಷಯಕ್ಕೆ ಸಂಬಂದಿಸಿದಂತೆ ಗುರುವಾರ ಕುಟುಂಬ ಸಮೇತ ಸ್ವಗ್ರಾಮಕ್ಕೆ ಆಗಮಿಸಿದ್ದಾರೆ.

Contact Your\'s Advertisement; 9902492681

ಈ ವೇಳೆ ಶುಕ್ರವಾರ ಗ್ರಾಮದ ಚೌಡೇಶ್ವರ ವೃತ್ತದ ಹೋಟೆಲ್‌ವೊಂದರಲ್ಲಿ ಕೊಲೆಯಾದ ಸುರೇಶ ಭಜಿ ತಿನ್ನಲು ಹೋಗಿದ್ದಾರೆ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಹೊಟೆನಲ್ಲಿದ್ದ ಗ್ರಾಹಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಮಾತಿಗೆ ಮಾತು ಬೆಳೆದು ಹೊಡೆದಾಟಕ್ಕೆ ಕಾರಣವಾಗಿದೆ. ಮಾರಾಮಾರಿಯಲ್ಲಿ ನೆಲಕ್ಕುರುಳಿದ ಸುರೇಶ ವಾಸ್ಟರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಚಿತ್ತಾಪುರ ಸಿಪಿಐ ಕೃಷ್ಣಪ್ಪ ಕಲ್ಲದೇವರು ಹಾಗೂ ವಾಡಿ ಠಾಣೆ ಪಿಎಸ್‌ಐ ವಿಜಯಕುಮಾರ ಭಾವಗಿ, ಪರಿಶೀಲನೆ ನಡೆಸಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಗ್ರಾಮದ ಮಹೆಬೂಬಅಲಿ, ಸೈಯದ್ ಪಾಷಾ, ಸೈಯ್ಯದ್ ಮಝರ್, ಶೋಯಲ್, ಮಹ್ಮದ್ ಶಾರುಖ್, ಸೈಯ್ಯದ್ ಹಜಾರ್ ಸೇರಿದಂತೆ ಒಟ್ಟು ಆರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಹಳಕರ್ಟಿ ಗ್ರಾಮದಲ್ಲಿ ಬಿಗುವಿನ ವಾತಾವರಣ ಸೃಷ್ಠಿಯಾಗಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here