ಗ್ರಾಮಗಳಿಗೆ ಬಸ್ಸಿನ ಸೌಲಭ್ಯ ಕಲ್ಪಿಸಲು ಕುಮಾರಸ್ವಾಮಿ ಸೇನೆ ಒತ್ತಾಯ

0
94

ಸುರಪುರ: ತಾಲ್ಲೂಕಿನ ಅನೇಕ ಗ್ರಾಮಗಳಿಗೆ ಇದುವರೆಗು ಬಸ್ಸಿನ ಸೌಲಭ್ಯ ಕಲ್ಪಿಸದ ಡಿಪೋ ಏನು ಕೆಲಸ ಮಾಡುತ್ತಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಸೇನೆ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಬೇಸರ ವ್ಯಕ್ತಪಡಿಸಿದರು.

ನಗರದ ಬಸ್ ಡಿಪೋ ಬಳಿ ಪ್ರತಿಭಟನೆ ನಡೆಸಿ ಮಾತನಾಡಿ,ತಾಲ್ಲೂಕಿನ ಬೊಮ್ಮನಹಳ್ಳಿ,ಮಲ್ಲಿಬಾವಿ ಸೇರಿದಂತೆ ಅನೇಕ ಗ್ರಾಮಗಳಿಗೆ ಇದುವರೆಗು ಬಸ್ಸಿನ ಸೌಲಭ್ಯವಿಲ್ಲ.ಅಲ್ಲದೆ ಗ್ರಾಮೀಣ ಪ್ರದೇಶಗಳಿಗೆ ಸಂಜೆ ಹೋಗುವ ವಸತಿ ಬಸ್ಸುಗಳು ಏಳು ಗಂಟೆಗೆ ಹೋಗುತ್ತಿದ್ದು,ಇದರಿಂದ ರಾತ್ರಿ ಎಂಟು ಗಂಟೆಗೆ ಬಂದರೆ ಬಸ್ಸುಗಳಿಲ್ಲದೆ ನಿತ್ಯವು ಅನೇಕ ಗ್ರಾಮಗಳ ಜನತೊಂದರೆ ಪಡುತ್ತಿದ್ದಾರೆ.ಆದ್ದರಿಂದ ವಸತಿ ಬಸ್ಸುಗಳನ್ನು ಕನಿಷ್ಟು ಏಂಟು ವರೆಗೆ ಓಡಿಸಬೇಕು.ಅಲ್ಲದೆ ಸುರಪುರ ಡಿಪೋದ ಅನೇಕ ಬಸ್ಸುಗಳು ಹಳೆಯ ಬಸ್ಸುಗಳಾಗಿದ್ದು ಇದರಿಂದ ಬಸ್ಸುಗಳು ರಸ್ತೆ ಮದ್ಯದಲ್ಲಿಯೆ ಕೆಟ್ಟು ನಿಲ್ಲುತ್ತವೆ.ಆದ್ದರಿಂದ ಹೊಸ ಬಸ್ಸುಗಳ ಓಡಿಸಬೇಕು ಮತ್ತು ಮುಖ್ಯವಾಗಿ ಡಿಪೋ ಬಲಭಾಗದ ತಡೆಗೋಡೆಯ ಪಕ್ಕದಲ್ಲಿ ನೀರು ಹರಿಯುತ್ತಿದ್ದು,ಇದರಿಂದ ಗೋಡೆ ಬೀಳುವ ಸಾಧ್ಯತೆಯಿದ್ದು ನೀರು ಹರಿಯುವುದನ್ನು ತಡೆಯಬೇಕೆಂದು ಒತ್ತಾಯಸಿದರು.

Contact Your\'s Advertisement; 9902492681

ನಂತರ ಕೆಎಸ್‌ಆರ್‌ಟಿಸಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಡಿಪೋ ವ್ಯವಸ್ಥಾಪಕರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಗೋಪಾಲ ಬಾಗಲಕೋಟೆ,ಮಾನಯ್ಯ ದೊರೆ,ಕೃಷ್ಣಾ ದಿವಾಕರ್,ಕೇಶಣ್ಣ ದೊರೆ,ಬಸವರಾಜ ಕವಡಿಮಟ್ಟಿ,ದೇವಪ್ಪ ದೇವರಮನಿ,ಅಂಬಣ್ಣ ದೊರೆ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here