ಬಾಬು ಪತ್ತಾರ ನೇಮಕ ವಾಸುದೇವ ಬಡಿಗೇರ ಸ್ವಾಗತ

0
168

ಶಹಾಪುರ : ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ಅಭಿವೃದ್ಧಿ ನಿಗಮಕ್ಕೆ ಹೈಕೋರ್ಟ್ನನ ಹಿರಿಯ ನ್ಯಾಯವಾದಿ ಮೂಲತಃ ಬಾಗಲಕೋಟ ಜಿಲ್ಲೆಯ ನಿಡಗುಂದಿ ಮೂಲದ ಬಾಬು ಪತ್ತಾರ್ ಅವರನ್ನು ನೇಮಕ ಮಾಡಿರುವುದು ಸ್ವಾಗತಾರ್ಹ ಎಂದು ಸಗರದ ಯುವ ಮುಖಂಡರಾದ ವಾಸುದೇವ ಬಡಿಗೇರ್ ಸಂತೋಷ ವ್ಯಕ್ತಪಡಿಸಿದರು.

ವಿಶ್ವಕರ್ಮ ಸಮಾಜ ತೀರಾ ಹಿಂದುಳಿದಿದ್ದು ಹಲವಾರು ಕುಲಕಸುಬನ್ನು ಆಧಾರವಾಗಿಟ್ಟು ಕೊಂಡು ಜೀವನ ಮಾಡುತ್ತಿದ್ದಾರೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಸಾಮಾಜಿಕವಾಗಿ ಮುಂದೆ ಬರಲು ನೂತನ ಅಧ್ಯಕ್ಷರಾದ ಬಾಬು ಪತ್ತಾರ್ ಅವರು ಹಲವಾರು ವರುಷಗಳಿಂದ ಹೋರಾಟಗಳನ್ನು ಮಾಡುತ್ತಲೇ ಬಂದಿದ್ದಾರೆ ಸದ್ಯಕ್ಕೆ ಈಗ ಕರ್ನಾಟಕ ರಾಜ್ಯ ವಿಶ್ವಕರ್ಮ ನಿಗಮ ಮಂಡಳಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ನಿಜಕ್ಕೂ ವಿಶ್ವಕರ್ಮ ಸಮಾಜಕ್ಕೆ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಸರಕಾರದ ವಿವಿಧ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಬಾಬು ಪತ್ತಾರ್ ಅವರು ಕಾರ್ಯ ನಿರ್ವಹಿಸಲಿದ್ದಾರೆ ಎಂಬುದು ಸಂಪೂರ್ಣವಾದ ನಂಬಿಕೆ ಇದೆ ಎಂದು ತಿಳಿಸಿದರು.ನಿಗಮದ ಯೋಜನೆಗಳು ಪಡೆದುಕೊಂಡು ವಿಶ್ವಕರ್ಮ ಸಮಾಜ ಸಂಪೂರ್ಣವಾಗಿ ಬೆಳೆಯಬೇಕು ಎಂಬುದೇ ನಮ್ಮೆಲ್ಲರ ಮಹದಾಸೆಯಾಗಿದೆ ಎಂದು ನುಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here