ದಲಿತ ಸಮುದಾಯದವರಿಗೆ ಸರಕಾರದಿಂದ ರುದ್ರಭೂಮಿ ಒದಗಿಸಬೇಕೆಂದು ಒತ್ತಾಯಿಸಿ ಮನವಿ

0
87

ಶಹಾಬಾದ:ಹೊನಗುಂಟಾ ಗ್ರಾಮದ ಭೀಮನಗರದ ದಲಿತ ಸಮುದಾಯದವರಿಗೆ ಸರಕಾರದಿಂದ ರುದ್ರಭೂಮಿ ಒದಗಿಸಬೇಕೆಂದು ಒತ್ತಾಯಿಸಿ ಸೋಮವಾರ ದಲಿತ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ತಹಸೀಲ್ದಾರ ಸುರೇಶ ವರ್ಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ದಲಿತ ವಿದ್ಯಾರ್ಥಿ ಒಕ್ಕೂಟದ ತಾಲೂಕಾ ಸಂಚಾಲಕ ಪೂಜಪ್ಪ ಮೇತ್ರೆ, ಈಗಾಗಲೇ ಹೊನಗುಂಟಾ ಗ್ರಾಮದ ಭೀಮನಗರದಲ್ಲಿ ಸುಮಾರು 150ಕ್ಕೂ ಹೆಚ್ಚು ದಲಿತ ಸಮುದಾಯಗಳಿವೆ.ಅದರಲ್ಲಿ ಸರಿಸುಮಾರು ಏಳೆಂಟು ಜನರಿಗೆ ಮಾತ್ರ ಸ್ವಂತ ಭೂಮಿ ಹೊಂದಿದ್ದು, ಉಳಿದವರಿಗೆ ಭೂಮಿಯಿಲ್ಲದ ಕಾರಣ ಶವ ಸಂಸ್ಕಾರ ಮಾಡಲು ತೊಂದರೆಯಾಗುತ್ತಿದೆ.ಸುಮಾರು ಹತ್ತು ದಶಕಗಳಿಂದ ಭೂಮಿ ಇದ್ದವರಿಗೆ ಮನವಿ ಮಾಡಿ ಶವ ಸಂಸ್ಕಾರ ಮಾಡುತ್ತ ಬಂದಿದ್ದೆವೆ.ಈಗ ನಮ್ಮ ದಲಿತ ಸಮುದಾಯದವರಿಗೆ ಸರಕಾರದಿಂದ ರುದ್ರಭೂಮಿ ಒದಗಿಸಿದರೇ ಬಹಳ ಅನುಕೂಲವಾಗುತ್ತದೆ.ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕೆಂದು ತಹಸೀಲ್ದಾರರಿಗೆ ಮನವಿ ಮಾಡಿದರು.

Contact Your\'s Advertisement; 9902492681

ದಲಿತ ವಿದ್ಯಾರ್ಥಿ ಒಕ್ಕೂಟದ ಸಂಘಟನಾ ಸಂಚಾಲಕ ಶರಣಬಸಪ್ಪ.ಎಮ್,ರಾಘವೇಂದ್ರ ಗುಡೂರ್, ಮಲ್ಲಿಕಾರ್ಜುನ ಗಿರೇನೂರ, ಸಂತೋಷ ಹಾದಿಮನಿ,ಅರ್ಜುನ ಮೇತ್ರೆ, ಮೈಲಾರಿ ಓಣಿ, ಬಸವರಾಜ ಶಾಸ್ತ್ರಿ, ಚಂದ್ರಾಮ ಹಲಕಟ್ಟಿ, ನಾಗಪ್ಪ ನ್ಯಾವಿನಿ, ವಿಶ್ವ ಯನಗುಂಟಿ, ಮೌನೇಶ ಕೌಂಟಿಗಿ, ನಿಂಗಪ್ಪ ನ್ಯಾವಿನಿ, ಚನ್ನಮಲ್ಲಪ್ಪ, ಶಿವಯೋಗಿ ಜುಂಜನಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here