ಶಹಾಬಾದ ನಗರಸಭೆಯಲ್ಲಿ ಸಕಾಲ ಸಪ್ತಾಹ ಆಚರಣೆ

0
89

ಶಹಾಬಾದ:ಸಕಾಲ ಯೋಜನೆ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಕಾಲ ಸಪ್ತಾಹ ಆಚರಿಸಲಾಗುತ್ತಿದೆ ಎಂದು ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಹೇಳಿದರು.

ಅವರು ಸೋಮವಾರ ನಗರಸಭೆಯಲ್ಲಿ ಆಯೋಜಿಸಲಾದ ಸಕಾಲ ಸಪ್ತಾಹ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

Contact Your\'s Advertisement; 9902492681

ಈ ಸಕಾಲ ಸಪ್ತಾಹ ನವೆಂಬರ್ 30 ರಿಂದ ಡಿಸೆಂಬರ್ 5 ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ನಾಗರಿಕರಿಗೆ ನಿಗದಿತ ಕಾಲಮಿತಿಯಲ್ಲಿ ಸೇವೆಗಳನ್ನು ಒದಗಿಸುವ ಉದ್ದೇಶದ ಸಕಾಲ ಯೋಜನೆ ಕುರಿತು ಹೆಚ್ಚಿನ ಅರಿವು ಮೂಡಿಸಲಾಗುತ್ತದೆ.ಅಲ್ಲದೇ ಸಕಾಲದಡಿ ಸ್ವೀಕರಿಸಿದ ಬಾಕಿ ಉಳಿದ ಅರ್ಜಿಗಳನ್ನು ವಿಲೇವಾರಿ ಮಾಡಲು ಅನುಕೂಲವಾಗುತ್ತದೆ.ಆದ್ದರಿಂದ ಈ ಬಗ್ಗೆ ಜನರು ತಿಳಿಸಿದುಕೊಂಡು ಸಕಾಲ ಯೋಜನೆಯ ಅನುಕೂಲ ಪಡೆದುಕೊಳ್ಳಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ನಗರಸಭೆಯ ಅಧ್ಯಕ್ಷ ಗಿರೀಶ ಕಂಬಾನೂರ,ನಗರಸಭೆಯ ಸದಸ್ಯರಾದ ಸಾಬೇರಾಬೇಗಂ,ಮಹ್ಮದ್ ಅಮ್ಜದ್, ಫಜಲ್ ಪಟೇಲ್, ಕಛೇರಿ ವ್ಯವಸ್ಥಾಪಕ ಶಂಕರ, ಜೆಇ ಬಸವರಾಜ ,ಶಾಂತರೆಡ್ಡಿ ದಂಡಗುಲಕರ್, ಕಂದಾಯ ಅಧಿಕಾರಿ ಸುನೀಲಕುಮಾರ, ಆರೋಗ್ಯ ನಿರೀಕ್ಷಕರಾದ ಶಿವರಾಜಕುಮಾರ, ಶರಣು, ಸಾಬಣ್ಣ ಸುಂಗಲಕರ್ ಸೇರಿದಂತೆ ಇತರರು ಇದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here